ಬೆಂಗಳೂರು: ಐಪಿಎಲ್ 2025ರ ಟ್ರೋಫಿಯನ್ನು ಗೆದ್ದ ಸಂತಸದಲ್ಲಿ, ಆರ್ಸಿಬಿ ಆಡಳಿತ ಮಂಡಳಿ ಬೆಂಗಳೂರಿನಲ್ಲಿ ಭವ್ಯವಾದ ಗೆಲುವಿನ ರ್ಯಾಲಿಯನ್ನು ಆಯೋಜಿಸಿತು. ಆದರೆ, ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರಿಂದ ಕಾಲ್ತುಗಳಿತ ಉಂಟಾಗಿ, 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತಕರ ಘಟನೆ ದೇಶಾದ್ಯಂತ ತೀವ್ರ ಆಘಾತವನ್ನುಂಟು ಮಾಡಿತ್ತು. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತಂಡ ಸ್ಪೋಟಕ ಮಾಹಿತಿ ಕಲೆ ಹಾಕಿದೆ.
https://www.facebook.com/ainkannada/videos/1029341255990387
ಕಾಲ್ತುಳಿತ ಆಗ್ತಿದ್ರೂ ಕೆಎಸ್ ಸಿಎ ಸಿಬ್ಬಂದಿಯಿಂದ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಕೆಎಸ್ ಸಿಎ ಮುಖ್ಯಸ್ಥರು ಸ್ಟೇಡಿಯಂ ಒಳಗೆ ಕ್ಲಬ್ ನಲ್ಲಿ ಪಾರ್ಟಿ ಮಾಡ್ತಿದ್ರಾ ಎಂಬ ಪ್ರಶ್ನೆ ಮೂಡಿದೆ. ಸಿಐಡಿ ತಂಡ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಕಲೆ ಹಾಕಿದ್ದು, ಸಿಸಿಟಿವಿ, ಮೊಬೈಲ್ ವೀಡಿಯೋಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಎಸ್ಸಿಎ ಕಚೇರಿಗೆ ಭೇಟಿ ನೀಡಿ ತನಿಖಾ ತಂಡ ಮಾಹಿತಿ ಪಡೆದಿದ್ದು, ಈ ವೇಳೆ ಕೆಎಸ್ಸಿಎ, ಡಿಎನ್ ಎ ಸಿಬ್ಬಂದಿ ವಿಚಾರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್.ಪಿ ಶುಭಾನ್ವಿತಾ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಇಂದು ನಾಲ್ವರು ಆರೋಪಿಗಳನ್ನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಅದಲ್ಲದೆ ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ಮೇಲಾಧಿಕಾರಿಗಳಿಗೆ ನೊಟೀಸ್ ನೀಡುವ ಸಾದ್ಯತೆ ಇದೆ.