ಟೊಮ್ಯಾಟೋ ಬೆಲೆ ದಿಢೀರ್ ಕುಸಿತ ಹಿನ್ನೆಲೆ ರಸ್ತೆಗೆ ಟೊಮ್ಯಾಟೊ ಚೆಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮೇಶ್ವರ ತಾಲೂಕಿನಾದ್ಯಂತ ನಿರಂತರವಾಗಿ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳು ಹಾಳಾಗಿ ಕಂಗಾಲಾಗಿರೋ ರೈತರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವಾಲಯದಿಂದ ಸಹಾಯ
ಕಳೆದ ಹಲವು ದಿನಗಳಿಂದ ಏರಿಳಿತ ಕಾಣ್ತಿದ್ದ ಟೊಮ್ಯಾಟೋ ದರ ಏಕಾಏಕಿ ಪಾತಾಳಕ್ಕೆ ಕುಸಿದಿದ್ದು 25 ರಿಂದ 50 ರೂಪಾಯಿಗೆ ಬಾಕ್ಸ್ ನಂತೆ ಮಾರಾಟವಾಗ್ತಿವೆ.
ಸಾಲಾ ಸೋಲ ಮಾಡಿ ಟೊಮ್ಯಾಟೊ ಬೆಳೆದ ರೈತರು ಇದೀಗ ಕಣ್ಣೀರಿನಲ್ಲಿ ಕೈ ತೊಳೆಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವು ರೈತರು ತಾವು ಬೆಳೆದ ಟೊಮ್ಯಾಟೊ ಜನರಿಗೆ ಉಚಿತವಾಗಿ ನೀಡಿದ್ರು.
ಜನರು ಕೂಡಾ ಮುಗಿಬಿದ್ದು ಬುಟ್ಟಿಗಳನ್ನ ತಂದು ಟೊಮ್ಯಾಟೋ ತೆಗೆದುಕೊಂಡು ಹೋದ್ರು. ಟೊಮ್ಯಾಟೊ ಬೆಳೆದ ರೈತರು ಮಾತ್ರ ಬೆಳೆದ ಬೆಳೆಗೆ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ.