ಚಾಮರಾಜನಗರ:- ಹನೂರು ತಾಲೂಕಿನ ರಾಮಾಪುರ ಅರಣ್ಯ ವಲಯದ ರಾಮಾಪುರ ಬೀಟ್ ನ ಹುಣಸೆ ಬೈಲು ಅರಣ್ಯ ಪ್ರದೇಶದಲ್ಲಿ ಮರಿಯಾನೆಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ನಡೆದಿದೆ.
ಅರಣ್ಯ ಸಿಬ್ಬಂದಿಗಳು ಗಸ್ತು ನಡೆಸುವಾಗ ಆನೆ ಕಳೇಬರ ಕಂಡುಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಮೃತ ಹೆಣ್ಣಾನೆಮರಿಗೆ 8-10 ವರ್ಷಗಳಾಗಿದ್ದು ಪಶು ವೈದ್ಯ ಡಾ.ಶಿವರಾಜು ಮೃತ ಆನೆಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿ ಸಹಜ ಸಾವೆಂದು ದೃಢಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ ಅನುಸಾರವಾಗಿ ಆನೆ ಕಳೇಬರವನ್ನು ಸುಡಲಾಗಿದೆ ಎಂದು ತಿಳಿದು ಬಂದಿದೆ.