ದೇವನಹಳ್ಳಿ : ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ ಪ್ರಕರಣ ಸಂಬಂಧ ಶ್ರೀನಗರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಏರ್ಲಿಫ್ಟ್ ಮಾಡಲಾಗಿದೆ.
ಶ್ರೀನಗರದಿಂದ ಕೆಂಪೇಗೌಡ ಏರ್ಪೋಟ್ ಗೆ ಕನ್ನಡಿಗರ ಹೊತ್ತ ಏರ್ ಇಂಡಿಗೋ ವಿಮಾನ ಆಗಮಿಸಿದ್ದಾರೆ. 6E9198 ಇಂಡಿಗೋ ವಿಮಾನದಲ್ಲಿ 178 ಜನ ಕನ್ನಡಿಗರನ್ನು ಏರ್ ಲಿಫ್ಟ್ ಮಾಡಲಾಗಿದೆ. ಕಾಶ್ಮೀರದ ಪಹಲ್ಗಾಮ್ ಗೆ ಹೊರಟಿದ್ದ ಕನ್ನಡಿಗರು ರಾಜ್ಯಕ್ಕೆ ಮರಳಿದ್ದಾರೆ. ತಾಯ್ನಾಡಿಗೆ ಬರಳಿದ ತಕ್ಷಣ ನಿಟ್ಟುಸಿರು ಬಿಟ್ಟ ಬಿಟ್ಟಿದ್ದು, ನಾವು ಕ್ಷೇಮವಾಗಿ ರಾಜ್ಯಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ಆದರೆ ಇನ್ನೊಂದ ಕಡೆ ಕಾಶ್ಮೀರದ ಪಹಲ್ಗಾಮ್ ಕ್ಷಣಗಳನ್ನು ನೆನೆದು ನೋವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ದೊಡ್ಡಬಳ್ಳಾಪುರ ತಾಲ್ಲೂಕಿನ 90 ಮಂದಿ ಪ್ರವಾಸಿಗರು ಸುರಕ್ಷಿತ..!
ಕನ್ನಡಿಗರು ವಾಪಸ್ ಆಗಮಿಸುತ್ತಿರುವ ಹಿನ್ನೆಲೆ ಏರ್ಪೋಟ್ ನಲ್ಲಿ ಸಕಲ ಸಿದ್ದತೆ ನಡೆಸಲಾಗಿದ್ದು, ಬಂದವರನ್ನ ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.