ಅಹಮಾದಾಬಾದ್ ಫ್ಲೈಟ್ ಏರಿ ಲಂಡನ್ ಸೇರಬೇಕಿದ್ದ 241 ಜೀವಗಳು ಸಾವಿನ ಮನೆ ಸೇರಿವೆ. ಮೊನ್ನೆ ಅಹಮಾದಾಬಾದ್ ನಲ್ಲಿ ನಡೆದ ಅತೀ ಘೋರ ದುರಂತದಲ್ಲಿ ಮನಮಿಡಿಯುವ ಕಥೆಗಳು ಒಂದೊಂದಾಗಿ ತೆರಳುತ್ತಿದೆ. ನೂರಾರು ಕನಸು ಹೊತ್ತಿದ್ದ ಜೀವಗಳು ಧಾರುಣವಾಗಿ ಅಂತ್ಯಕಂಡಿವೆ. ಪಡವಾ ಸದೃಶ್ಯ ರೀತಿ ಎಂಬಂತೆ ಓರ್ವ ಬದುಕುಳಿದು ಬಂದಿದ್ದಾನೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಟೇಕ್ಆಫ್ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ 242 ಪ್ರಯಾಣಿಕರ ಪೈಕಿ ವಿಶ್ವಾಸ್ ಕುಮಾರ್ ರಮೇಶ್ ಎಂಬುವರವು ಅಚ್ಚರಿ ರೀತಿ ಬದುಕಿ ಬಂದಿದ್ದಾರೆ. 11A ಸೀಟ್ನಲ್ಲಿ ಕುಳಿತಿದ್ದ ವಿಶ್ವಾಸ ಸಾವನ್ನು ಗೆದ್ದು ಬಂದಿದ್ದು, ಎಲ್ಲರ ಅಚ್ಚರಿಕೆ ಕಾರಣವಾಗಿದೆ. ಇದೀಗ 27 ವರ್ಷದ ಹಿಂದೆ ನಟನೋರ್ವ ವಿಮಾನ ದುರಂತದಲ್ಲಿ ಬದುಕಿ ಬಂದ ಘಟನೆ ಮುನ್ನೆಲೆಗೆ ಬಂದಿದೆ.
ಡಿಸೆಂಬರ್ 11, 1998 ರಂದು ದಕ್ಷಿಣ ಥೈಲ್ಯಾಂಡ್ನಲ್ಲಿ ಥಾಯ್ ಏರ್ವೇಸ್ ವಿಮಾನ TG261 ತಾಂತ್ರಿಕ ಸಮಸ್ಯೆಯಿಂದ ಜೌಗು ಪ್ರದೇಶಕ್ಕೆ ಉರುಳಿ ಬಿದ್ದಿತ್ತು. ಈ ಘಟನೆಯಲ್ಲಿ 101 ಜನ ಮೃತಪಟ್ಟಿದ್ದರು. ಆದ್ರೆ ಇದೇ ವಿಮಾನದಲ್ಲಿದ್ದ 20 ವರ್ಷದ ಥಾಯ್ ನಟ ರುವಾಂಗ್ಸಾಕ್ ಲೊಯ್ಚುಸಾಕ್ ಪವಾಡದ ರೀತಿ ಬದುಕುಳಿದಿದ್ದರು. ಅಹಮಾದಾಬಾದ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಸಾವನ್ನೇ ಗೆದ್ದು ಬಂದಿರುವ ಸುದ್ದಿ ಕೇಳಿ ಸ್ವತಃ ರುವಾಂಗ್ಸಾಕ್ ನಲ್ಲಿ ಬರೆದುಕೊಂಡಿದ್ದಾರೆ.
ಥಾಯ್ ಭಾಷೆಯಲ್ಲಿ ಬರೆದ ಫೇಸ್ಬುಕ್ ಪೋಸ್ಟ್ನಲ್ಲಿ, ರುವಾಂಗ್ಸಾಕ್, “ಭಾರತದಲ್ಲಿ ವಿಮಾನ ಅಪಘಾತದಿಂದ ಬದುಕುಳಿದ ವ್ಯಕ್ತಿ. ಅವರು ನನ್ನಂತೆಯೇ ಅದೇ ಸೀಟಿನಲ್ಲಿ ಕುಳಿತಿದ್ದರು. 11A ಎಂದು ಹೇಳಿದ್ದಾರೆ. ರುವಾಂಗ್ಸಾಕ್ ಹಾಗೂ ವಿಶ್ವಾಸ್ ಕುಮಾರ್ ರಮೇಶ್ ಇಬ್ಬರು 11 ಸೀಟ್ ನಲ್ಲಿ ಕುಳಿತಿರುವುದು ಈ ಗ ಅಚ್ಚರಿಕೆ ಕಾರಣವಾಗಿದೆ. ಇದು ಲಕ್ಕಿ ಸೀಟ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ಸೀಟ್ ಗೆ ಈ ಬೇಡಿಕೆ ಹೆಚ್ಚಿದ್ದು, ವಿಮಾನದಲ್ಲಿ ಪ್ರಯಾಣ ಮಾಡುವವರು ಇನ್ಮುಂದೆ ಆ ಸೀಟ್ನ್ನೇ ಬುಕ್ ಮಾಡಿಕೊಳ್ಳಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.