ಬೀದರ್: ಕೇಂದ್ರಸರ್ಕಾರ ಕೊಡಬೇಕಾದ ಹಣವನ್ನು ಕೊಡುತ್ತಿಲ್ಲ, ಆದ್ರೂ ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಹಣವನ್ನು ಕೊಡುತ್ತಿಲ್ಲ. ಆದರೂ, ನಾವು ರಾಜ್ಯದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದರು.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಇನ್ನೂ ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಇದನ್ನು ಇತರ ರಾಜ್ಯದವರು ಬಂದು ಗಮನಿಸಿ, ಮಾದರಿಯಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಅವರ ಪಕ್ಷದಲ್ಲಿ ಏನಿದೆ? ಐದು ಗ್ಯಾರಂಟಿಗಳು ಒಳ್ಳೆಯದೋ, ಕೆಟ್ಟದ್ದೋ, ಜನರೇ ತೀರ್ಮಾನಿಸಲಿ ಎಂದು ಕಿಡಿಕಾರಿದ್ದಾರೆ.
ನಾವು ಪ್ರತಿ ತಿಂಗಳು 2,000 ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದೇವೆ. ಏನೋ ತಾಂತ್ರಿಕ ಕಾರಣದಿಂದ ತಡವಾಗಿರಬಹುದು. ಆದರೆ, ಎಲ್ಲ ಫಲಾನುಭವಿಗಳಿಗೂ ಹಣ ತಲುಪಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.