Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ. 73.97ರಷ್ಟು ಫಲಿತಾಂಶ

    By AIN AuthorApril 9, 2025
    Share
    Facebook Twitter LinkedIn Pinterest Email
    Demo

    ಚಾಮರಾಜನಗ:  2024-25ನೇ ಸಾಲಿನ ಮಾರ್ಚ್ 2025ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಚಾಮರಾಜನಗರ ಜಿಲ್ಲೆಯು ಶೇ. 73.97ರಷ್ಟು ಫಲಿತಾಂಶ ಪಡೆದಿದ್ದು ರಾಜ್ಯದಲ್ಲಿ 13ನೇ ಸ್ಥಾನ ಪಡೆದಿದೆ. ಹಿಂದಿನ ವರ್ಷದಲ್ಲಿ ಜಿಲ್ಲೆಯು ಶೇ.84.99 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 14ನೇ ಸ್ಥಾನದಲ್ಲಿತ್ತು. ಈ ಬಾರಿ  13ನೇ ಸ್ಥಾನಕ್ಕೆ ಬಂದಿದೆ.

     

    ಒಟ್ಟು 6488 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4799 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕರ ಸಂಖ್ಯೆ 3064 ಇದ್ದು ಇವರಲ್ಲಿ 1876 ಬಾಲಕರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ. 61.23ರಷ್ಟಿದೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕಿಯರ ಸಂಖ್ಯೆ 4028 ಇದ್ದು ಇವರಲ್ಲಿ 3059 ಬಾಲಕಿಯರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ.75.94 ರಷ್ಟಿದೆ. 

     

    ಕಲಾ ವಿಭಾಗದಲ್ಲಿ ಒಟ್ಟು 2122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1122 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 62.3ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 2343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1873 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.79.94ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 2023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1604 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ. 79.29ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 4700. ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 3463 ಇದ್ದು, ಶೇ. 73.68ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 1788 ಇದ್ದು, ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 1336 ಆಗಿದ್ದು ಶೇ.74.72ರಷ್ಟು ಫಲಿತಾಂಶ ಬಂದಿದೆ.

    ದ್ವಿತೀಯ ಪಿಯುಸಿ ಪರೀಕ್ಷ ಫಲಿತಾಂಶ ; 589 ಅಂಕಗಳ ಪಡೆದ ಮಲಕಣ್ಣ ತಳವಾರ

    ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ

     

    ಕಲಾ ವಿಭಾಗ:- ಅಶ್ವಿನಿ. ಬಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 573 (ಶೇ.95.50), ಕಾವ್ಯ ಎಂ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕಬ್ಬಳ್ಳಿ, ಪಡೆದ ಅಂಕ 573 (ಶೇ.95.50), ಮನೋಜ್ ಕುಮಾರ್, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಾಮರಾಜನಗರ, ಪಡೆದ ಅಂಕ 572 (ಶೇ.95.30), ಹರ್ಷಿತ ಎಂ.ಕೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಆಲೂರು, ಪಡೆದ ಅಂಕ 571 (ಶೇ.95.16).

      

    ವಾಣಿಜ್ಯ ವಿಭಾಗ:- ಮಹೇಶ್. ಎನ್, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 589 (ಶೇ.98.16), ಸುಪ್ರೀತಾ. ಕೆ, ಬ್ರೈಟ್ ಪದವಿ ಪೂರ್ವ ಕಾಲೇಜು, ಚಾಮರಾಜನಗರ, ಪಡೆದ ಅಂಕ 586 (ಶೇ.97.66), ತನುಶ್ರೀ ಹೆಚ್., ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 584 (ಶೇ.97.33),.

     

    ವಿಜ್ಞಾನ ವಿಭಾಗ :- ಅಮೃತಾ. ವಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 584 (ಶೇ.97.33), ಪ್ರೀಯಾ. ಆರ್, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 583 (ಶೇ.97.16), ಯತೀನ್ ಗೌಡ. ಪಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 583 (ಶೇ.97.16), ಜೀವನ್. ಎಸ್. ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 581 (ಶೇ.96.83), ಪ್ರಭಾಮಣಿ ಕೆ.ಪಿ, ಮುರುಘರಾಜೇಂದ್ರ ಪದವಿ ಪೂರ್ವ ಕಾಲೇಜು, ಮರಿಯಾಲ, ಪಡೆದ ಅಂಕ 581 (ಶೇ. 96.83), ಸಾನಿಕಾ. ಜಿ, ಶ್ರೀ ವಾಸವಿ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ, ಪಡೆದ ಅಂಕ 581 (ಶೇ.96.83) ಆಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    BELAGAVI – ಆಟೋದಲ್ಲೇ ನೇಣಿಗೆ ಶರಣಾದ ಪ್ರೇಮಿಗಳು

    July 1, 2025

    ಸಿದ್ದರಾಮಯ್ಯ ಲಾಟರಿ ಹೊಡೆದ್ಬಿಟ್ಟ – ಸಂಚಲನ ಸೃಷ್ಟಿಸಿದ ಬಿ.ಆರ್.ಪಾಟೀಲ್ ವಿಡಿಯೋ

    July 1, 2025

    ಸಂಘಟನಕಾರ, ಹೋರಾಟಗಾರನಿಗೆ ಕೊಡುವ ಅವಕಾಶ- ಡಿಕೆಶಿ ಪರ ಇಕ್ಬಾಲ್ ಹುಸೇನ್ ಬ್ಯಾಟಿಂಗ್

    July 1, 2025

    ದಾವಣಗೆರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ;ತಾಯಿ-ಮಗ ದುರ್ಮರಣ

    July 1, 2025

    ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ; ಕೊನೆಗೂ ಗಡಿ ಉಸ್ತುವಾರಿ ಸಚಿವರ ನೇಮಿಸಿದ ಸರ್ಕಾರ

    July 1, 2025

    ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಸಾವು – ಕಾರಿನ ಮುಂಭಾಗ ಸಂಪೂರ್ಣ ಜಖಂ!

    July 1, 2025

    ಹಾಸನದಲ್ಲಿ ಮಹಾಮಾರಿ ಹೃದಯಾಘಾತಕ್ಕೆ ಬಾಣಂತಿ ಬಲಿ ; ನಿಲ್ಲದ ಆತಂಕ

    July 1, 2025

    ಹಾಸನಕ್ಕೆ “ಹೃದಯಾಘಾತʼ ಪೆಡಂಭೂತ ; ಹಾರ್ಟ್ ಅಟ್ಯಾಕ್‌ನಿಂದ ಮತ್ತೋರ್ವ ಸಾವು

    July 1, 2025

    ಸಚಿವ ಚಲುವರಾಯಸ್ವಾಮಿ ಕ್ಷೇತ್ರ ಬದಲಾವಣೆ ಆಗುತ್ತಾ!? ಸ್ಪೋಟಕ ಹೇಳಿಕೆ ಕೊಟ್ಟ ನಿಖಿಲ್!

    July 1, 2025

    Crime News: ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತ!

    July 1, 2025

    ಹೇಮಾವತಿ ನೀರಿಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ: ಶಾಸಕ ಡಾ.ರಂಗನಾಥ್

    July 1, 2025

    ದೇವನಹಳ್ಳಿ: ಜಿಲ್ಲಾಡಳಿತ ಭವನದ ಮುಂದೆ ಕೆಂಪೇಗೌಡರ 516 ನೇ ಜಯಂತೋತ್ಸವ

    July 1, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.