ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದರೋಡೆ ಗ್ಯಾಂಗ್, ಕಳ್ಳತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅದರಂತೆ ಇಲ್ಲೊಂದು ಖತರ್ನಾಕ್ ಡೆಡ್ಲಿ ದರೋಡೆ ಗ್ಯಾಂಗ್, ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ.
ವೇಗವಾಗಿ ಬರೋ ಕಾರ್ ಗಳನ್ನೇ ಈ ಖದೀಮರ ಗ್ಯಾಂಗ್ ಟಾರ್ಗೆಟ್ ಮಾಡುತ್ತೆ. ಹೈವೇ ಮಧ್ಯೆ ಕಲ್ಲಿಟ್ಟು ಆ್ಯಕ್ಸಿಡೆಂಟ್ ಮಾಡಿಸಿ ಗ್ಯಾಂಗ್ ಲೂಟಿ ಮಾಡುತ್ತಿದೆ. ಅಪಘಾತ ಆಗ್ತಿದ್ದಂತೆ ಡೆಡ್ಲಿ ಅಟ್ಯಾಕ್ ಮಾಡಿ ಲೂಟಿ ಮಾಡುತ್ತಾರೆ. ಸದ್ಯ ಹೊಸಕೋಟೆಯಿಂದ ಚಿತ್ತೂರಿನವರೆಗೆ ಈ ಹೈವೇ ಸಂಪರ್ಕ ಇದ್ದು, ಕಳೆದ 25 ತಾರೀಖಿನಂದು ಮೂರಕ್ಕೂ ಹೆಚ್ಚು ಸಾವಾಗಿರೋ ಮಾಹಿತಿ ಲಭ್ಯವಾಗಿದೆ. ಹೈವೇದಲ್ಲಿ ಹೊಸಕೋಟೆಯಿಂದ ಕೆಜಿಎಫ್ ಮಾರ್ಗದಲ್ಲಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ವಕೀಲ ಹುಸೇನ್ ಓವೈಸಿ ಯವರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಡಿಜಿ ಐಜಿಪಿ,ಹೈವೇ ಅಥಾರಿಟಿ, ಹೈವೇ ಚೀಫ್ ಇಂಜಿನಿಯರ್ ಗೆ ದೂರು ನೀಡಿದ್ದಾರೆ. ಮಧ್ಯೆ ಹೈವೇದಲ್ಲಿ ಕಲ್ಲಿಟ್ಟು ಡಿವೈಡರ್ ಮೇಲೆ ಕುಳಿತು ಗ್ಯಾಂಗ್ ವಾಚ್ ಮಾಡುತ್ತೆ. ಒಂದು ಕಾರು ತಪ್ಪಿದರೆ ಕಲ್ಲು ಸ್ಥಳಾಂತರ ಮಾಡಿ ಇನ್ನೊಂದು ಕಾರಿಗೆ ಸ್ಕೆಚ್ ಹಾಕುತ್ತೆ. ಆರೋಪಿಗಳ ಚಲನವಲನ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮ್ ಅಲ್ಲಿ ಸೆರೆಯಾಗಿದೆ. ಈ ರೀತಿ ಕೃತ್ಯಗಳು ನಡೆಯಲು ಹೈವೇಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಹೈವೇ ಪೆಟ್ರೋಲಿಂಗ್,ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ತುರ್ತುಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೇವೆಗಳಿಲ್ಲ ಎಂದು ತಿಳಿದು ಬಂದಿದೆ.