ನೆಲಮಂಗಲ:- ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಂಬೇಡ್ಕರ್ ಭವನದ ಮುಂದೆ ಜರುಗಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!
ಅತೀಕ್ ರೇಹಮಾನ್ ಎಂಬುವವರಿಗೆ ಸೇರಿದ್ದ ನಗದು ಕಳ್ಳತನವಾಗಿದೆ. ಇವರು ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ತನ್ನ ಅಣ್ಣನಿಗೆ ಸಂಬಂಧಿಸಿದ ಹಣವನ್ನ ತರುವಂತೆ ಸೂಚನೆ ಕೊಟ್ಟಿದ್ದಾರೆ. ಬ್ಯಾಂಕ್ ನಿಂದ ಹಣ ತೆರವಂತೆ ಅತಿಕ್ ರೆಹಮಾನ್ ಗೆ ಅತಿಕ್ ಅಣ್ಣ ಹೇಳಿದ್ದರು. ದಾಬಸ್ ಪೇಟೆಯಿಂದ ಹಣ ತೆಗೆದುಕೊಂಡು ಅತೀಕ್ ರೆಹಮಾನ್ ಬಂದಿದ್ದರು.
ಅತೀಕ್ ಅವರು ದಾಬಸ್ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದರು ಎನ್ನಲಾಗಿದೆ. ದಾಬಸ್ಪೇಟೆಯಿಂದ ಹಣ ತೆಗೆದುಕೊಂಡು ಬಂದಿದ್ದ ಅತೀಕ್, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಹೋಗಿದ್ದರು. ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.