ನವದೆಹಲಿ: ಸೆರೆಗೆ ಬೀಳದೇ ತಪ್ಪಿಸಿಕೊಂಡಿರುವ ತಿಮಿಂಗಲಗಳನ್ನು ಹಿಡಿಯುವುದು ಗುರಿಯಾಗಿರಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಡಿಆರ್ಐನ ಹೊಸ ಮುಖ್ಯಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಅಲ್ಲಿ ಇಲ್ಲಿ ಪ್ರಕರಣಗಳನ್ನು ಪತ್ತೆ ಮಾಡುವುದಕ್ಕಷ್ಟೇ ಸೀಮಿತವಾಗದೆ ಇಡೀ ಜಾಲವನ್ನು ಭೇದಿಸುವುದು ಗುರಿಯಾಗಿರಬೇಕು. ಈ ಅಂಶವನ್ನು ನಾನು ಅನೇಕ ಬಾರಿ ಹೇಳಿದ್ದೇನೆ. ನೀವು ಸಣ್ಣ ಮೀನು ಹಿಡಿಯುವುದರಿಂದ ಪ್ರಯೋಜನ ಇಲ್ಲ. ನಮ್ಮ ಗಾಳಕ್ಕೆ ಸಿಗದ ದೊಡ್ಡ ತಿಮಿಂಗಲಗಳೇ ಇವೆ’ ಎಂದು ಹೇಳಿದರು.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ವ್ಯಾಲ್ಯೂ ಚೈನ್ನಂತೆ ಇಡೀ ಸ್ಮಗ್ಲಿಂಗ್ ಚೈನ್ ಅನ್ನು ಟ್ರ್ಯಾಕ್ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಅದು ಅಷ್ಟು ಸುಲಭ ಅಲ್ಲವಾದರೂ ಅಷ್ಟು ಆಳಕ್ಕೆ ಹೋಗಬೇಕು. ಬಹಳ ಜಾಣತನದಿಂದ ಕೆಲ ಸ್ಮಗ್ಲಿಂಗ್ ಚಟುವಟಿಕೆಗಳನ್ನು ಪತ್ತೆ ಮಾಡಿ ತಡೆದಿದ್ದೇವೆ. ಆದರೆ ಆ ಪ್ರಕರಣಗಳನ್ನು ಸರಿಯಾಗಿ ಫಾಲೋ ಅಪ್ ಮಾಡಲು ಎಡವುತ್ತಿದ್ದೇವೆ.
‘ನಾನು ಒಂದೆರಡು ಪ್ರಕರಣಗಳನ್ನು ಗಮನಿಸಲು ಆರಂಭಿಸಿದ್ದೇನೆ. ಅವುಗಳನ್ನು ನೀವು ತಾರ್ಕಿಕ ಅಂತ್ಯಕ್ಕೆ ಯಾವಾಗ ಮುಟ್ಟಿಸುತ್ತೀರಿ ಎಂದು ಕಾಯುತ್ತಿದ್ದೇನೆ. ತಾರ್ಕಿಕ ಅಂತ್ಯ ಎಂದರೆ, ಒಂದು ಆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ಎರಡನೆಯದು, ಆ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ಗೊತ್ತಾಗಬೇಕು’ ಎಂದು ಹೇಳಿದ್ದಾರೆ.