ಬೆಂಗಳೂರು: ಕೇಂದ್ರ ಸರ್ಕಾರ ಗಣತಿ ಮಾಡಲಿ ಅದರ ಜೊತೆ ಹೋಲಿಕೆ ಮಾಡಲು ನಮಗೆ ಗಣತಿ ಬೇಕಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ಗೆ ಸಿಎಂ ತಲೆಬಾಗಿದ್ದಾರೆ. ಸರ್ವೇ ಬಗ್ಗೆ ಕೆಲವು ಸಮುದಾಯಗಳ ವಿರೋಧ ಇತ್ತು. ಇದನ್ನ ಸರಿಪಡಿಸಲು ಹೈಕಮಾಂಡ್ ನಾಯಕರು ಸಿಎಂ ಜೊತೆ ಚರ್ಚೆ ಮಾಡಿ,
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಹೊಸ ಜಾತಿಗಣತಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲಿ ಲೋಪ ಆಗಿದೆ ಅದನ್ನು ಸರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಒಳ್ಳೆಯದಾಗಿದೆ. ಕೇಂದ್ರ ಸರ್ಕಾರ ಗಣತಿ ಮಾಡಲಿ ಅದರ ಜೊತೆ ಹೋಲಿಕೆ ಮಾಡಲು ನಮಗೆ ಗಣತಿ ಬೇಕಾಗುತ್ತದೆ ಎಂದರು.
ಕಾಲ್ತುಳಿತ ಪ್ರಕರಣ ಡೈವರ್ಟ್ ಮಾಡಲು ಜಾತಿಗಣತಿ ವಿಷಯ ತಂದಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಆರೋಪ ಮಾಡುವುದೇ ಕೆಲಸ. ಅವರು ಆರೋಪ ಮಾಡಲಿ. ಬಿಜೆಪಿ ಒಳಜಗಳ ಮುಚ್ಚಿ ಹಾಕೋಕೆ ಕಾಲ್ತುಳಿತ ಪ್ರಕರಣ ತೆಗೆದುಕೊಂಡಿದ್ದಾರೆ.
ಯತ್ನಾಳ್ ಸೇರಿ ಮೂರು ಗುಂಪಿದೆ. ಪಕ್ಷ ಉದ್ಧಾರ ಆಗುವುದಿಲ್ಲ. ಇವರಿಗೆ ಬುದ್ಧಿ ಇಲ್ಲ ಎಂದು ಜನ ಮಾತಾಡುತ್ತಿದ್ದಾರೆ. ಅದನ್ನ ಡೈವರ್ಟ್ ಮಾಡೋಕೆ ಈ ವಿಷಯ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.