Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹಿಂದೂ ಕಾರ್ಯಕರ್ತನ ಭೀಕರ ಹತ್ಯೆ: ಗೃಹಸಚಿವರು ಬದುಕಿದ್ದಾರಾ!? – ಬಿವೈ ವಿಜಯೇಂದ್ರ ವಾಗ್ದಾಳಿ!

    By AIN AuthorMay 2, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು/ಮಂಗಳೂರು:- ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷವು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ.

    ಕರ್ನಾಟಕವನ್ನು ಕಾಶ್ಮೀರ ಪರಿಸ್ಥಿತಿ ಮಾಡಲು ಕಾಂಗ್ರೆಸ್ ಹೊರಟಿದಂತಿದೆ: ಬಿವೈ ವಿಜಯೇಂದ್ರ ವಾಗ್ದಾಳಿ!

    ಬಿವೈ ವಿಜಯೇಂದ್ರ ಹೇಳಿದ್ದೇನು!!

    ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ್ ಬರ್ಬರ ಹತ್ಯೆ ನಡೆದಿದ್ದು, ಇದು ಪೂರ್ವನಿಯೋಜಿತ ಕೃತ್ಯವಾಗಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ಹಿಂದುಗಳ ಹತ್ಯೆಯಾಗಿತ್ತು. ಇದು‌ ಮಾಸುವ ಮುನ್ನವೆ ಮತ್ತೆ ಮಂಗಳೂರಿನಲ್ಲಿ ಹಿಂದುವಿನ ಹತ್ಯೆಯಾಗಿದೆ..

    ಸಿದ್ದರಾಮಯ್ಯ ಸರ್ಕಾರ ಬಂದಮೇಲೆ ಎನ್ ಮಾಡಿದ್ರೂ ನಡೆಯುತ್ತದೆ ಅನ್ನೋ ಮನೋಭಾವನೆ ಬಂದಿದೆ. ಅದಕ್ಕೆ ಈ ಘಟನೆ ನಡೆಯುತ್ತಿದೆ. ನಾವು ಹೇಳೋದು ಇಷ್ಟೇ.. ಗೃಹಸಚಿವರು ಬದುಕಿಲ್ಲವಾ..? ಹಿಂದು ಕಾರ್ಯಕರ್ತನ ಜೀವಕ್ಕೆ ಬೆದರಿಕೆ ಇದೆ ಎಂದು ಗೊತ್ತಿದೆ ಆದ್ರೂ ಘಟನೆ ಆಗಿದೆ ಇದಕ್ಕೆ ಏನು ಹೇಳೋಣ ಎಂದು ವಾಗ್ದಾಳಿ ನಡೆಸಿದರು.

    ಸುಹಾಸ್ ಕೊಲೆಯನ್ನು ನಾವು ಖಂಡಿಸುತ್ತೆನೆ. ಬಿಜೆಪಿ ಇಂದು ರಾಜ್ಯಾವ್ಯಾಪಿ ಹೋರಾಟಕ್ಕೆ ಕರೆ ಕೊಡುತ್ತೆನೆ. ನಾನು ಈಗ ಮಂಗಳೂರಿಗೆ ಹೊರಡುತ್ತಿದ್ದೆನೆ. ನಿರಂತರವಾಗಿ ದೇಶದ್ರೋಹಿಗಳಿಗೆ ಶಕ್ತಿ ಕೊಡುತ್ತಿದ್ದಾರೆ. ಗೃಹ ಇಲಾಖೆಯ ನಿಷ್ಕ್ರಿಯತೆ ರಾಜ್ಯದಲ್ಲಿ ಇದ್ದಿವಾ ಅಥವಾ ಪಾಕ್ ನಲ್ಲಿದ್ದೆವಾ ಅನ್ನಿಸ್ತಿದೆ. ಸರ್ಕಾರದ ಮೃದು ಧೋರಣೆ ದೇಶದ್ರೋಹಿಗಳಿಗೆ ಶಕ್ತಿ ತುಂಬುತ್ತಿದೆ ಎಂದು ವಿಜಯೇಂದ್ರ ಹೇಳಿದರು.

    ಕಾಂಗ್ರೆಸ್ ನವರು ಮೂರ್ಖರು:

    ರಾಹುಲ್ ಗಾಂಧಿ ಒತ್ತಡದಿಂದ ಜಾತಿಗಣತಿಗೆ ನಿರ್ಧಾರ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ನವರು ಮೂರ್ಖರಿದ್ದಾರೆ. ರಾಹುಲ್ ಗಾಂದಿಗೆ ಹೆದರಿ ಜಾತಿಗಣತಿ ಘೋಷಣೆ ಮಾಡಿದ್ದಾರೆ ಅಂತಾರೆ. ಹಿಂದೆ ಯಾಕೆ ಇಂದಿರಾ ಗಾಂದಿ, ರಾಜೀವ್ ಗಾಂಧಿ,ಮನಮೋಹನ್ ಸಿಂಗ್ ಅವರಿಂದ ಯಾಕೆ ಮಾಡಲು ಅಗಿಲ್ಲ. ನಿಮ್ಮ ಜಾತಿಗಣತಿಗೆ ಮೋಯ್ಲಿ ಅವರು ವಿರೋಧ ಮಾಡಿದ್ದಾರೆ. ಇದಕ್ಕೆ ಸಿಎಂ ಮೊದಲು ಉತ್ತರ ಕೊಡಲಿ. ಬಿಜೆಪಿ ಶೋಷಿತರ,ಪೀಡಿತರ, ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತೆ. ನೀವು 2014ರಲ್ಲಿ ನೀವೇ ಸಿಎಂ ಆಗಿದ್ರಿ. ಕಾಂತರಾಜು ಕೊಟ್ಟಿದ್ದ ಪ್ರತಿ ಕಾಣೆಯಾಗಿದೆ. ಇದು ಜಯಪ್ರಕಾಶ್ ಹೆಗ್ಡೆ ಕೊಟ್ಟಿದ್ದೂ ಅಥವಾ ನೀವೆ ಸೃಷ್ಟಿ ಮಾಡಿದ್ದೋ ಎಂದು ನೀವು ಹೇಳಬೇಕು. ಮೋದಿ ಸರ್ಕಾರ ಎಲ್ಲರಿಗೂ ನ್ಯಾಯ ಕೊಡಲು ಹೊರಟಿದೆ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಲಕ್ಷ-ಲಕ್ಷ ವಂಚನೆ ಕೇಸ್: ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಗೋಲ್ಡ್ ಸುರೇಶ್!

    June 18, 2025

    ಕಾರ್ಯಕ್ರಮಕ್ಕೆ ಹೋದ ಯುವಕ ಕೇರಳದ ಕೊಳದಲ್ಲಿ ಬಿದ್ದು ಸಾವು!

    June 18, 2025

    ಕೆಆರ್ ಪುರದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ!

    June 18, 2025

    ಇನ್ನು ಮುಂದೆ ಸಾರಿಗೆ ಇಲಾಖೆ ಮಾದರಿಯಲ್ಲಿ ಕುಡಿಯುವ ನೀರಿನ ದರ ಪರಿಷ್ಕರಣೆ; ಡಿ.ಕೆ. ಶಿವಕುಮಾರ್!

    June 18, 2025

    ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಹಾ ಎಡವಟ್ಟು: ಸತ್ತ ಶಿಶುವನ್ನು 8 ದಿನವಾದ್ರೂ ತಾಯಿಗೆ ತೋರಿಸದ ವೈದ್ಯರು!

    June 18, 2025

    ಕೌಟುಂಬಿಕ ಕಲಹ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ!

    June 18, 2025

    ಮಲೆ ಮಹದೇಶ್ಚರ ಕೋಟಿ ಒಡೆಯ: 2.65 ಕೋಟಿ ಕಾಣಿಕೆ ಸಂಗ್ರಹ!

    June 18, 2025

    ಹುಡುಗಿ ವಿಚಾರಕ್ಕೆ ಕಿರಿಕ್: ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್! Video Viral

    June 18, 2025

    ಚಾಮರಾಜನಗರ ಆಕ್ಸಿಜನ್ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ!

    June 18, 2025

    ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವರ್ಗಾವಣೆ: ಜಿಲ್ಲಾಡಳಿತದಿಂದ ಬೀಳ್ಕೊಡುಗೆ!

    June 18, 2025

    IPS ಅಧಿಕಾರಿ ವಿರುದ್ದ ಭ್ರಷ್ಟಾಚಾರ ಆರೋಪ ಕೇಸ್: ಬಂಧನ ಭೀತಿಯಿಂದ ಕೋರ್ಟ್’ಗೆ ಅರ್ಜಿ ಮೇಲೆ ಅರ್ಜಿ

    June 18, 2025

    ನೀವು ಮನಸ್ಸು ಮಾಡಿದರೆ ಮೇಲಕ್ಕೂ ಏರಿಸಬಹುದು, ಕೆಳಕ್ಕೂ ಬೀಳಿಸಬಹುದು: ಡಿ.ಕೆ. ಶಿವಕುಮಾರ್

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.