ಮೈಸೂರು:ಹನಿಟ್ರ್ಯಾಪ್ ಅಂದ್ರೆ ಯಾರಾದ್ರೂ ಪ್ರಭಾವಿ ವ್ಯಕ್ತಿನ ಗುರಿಯಾಗಿಸಿಕೊಂಡು, ಒಬ್ಬ ಮಹಿಳೆಯ ಮೂಲಕ ಅವರಿಗೆ ಲೈಂಗಿಕ ಆಮಿಷ ತೋರಿಸಿ, ಅವರ ರಹಸ್ಯ ಮಾಹಿತಿಯನ್ನಾಗಲಿ ಅಥವಾ ಹಣವನ್ನಾಗಲಿ ಕಿತ್ತುಕೊಳ್ಳುವುದೇ ಈ ಹನಿಟ್ರ್ಯಾಪ್. ಭಾರತದಲ್ಲಿ ಹನಿಟ್ರ್ಯಾಪ್ ಹೊಸದೇನಲ್ಲ. ಆದರೆ ಇತ್ತೀಚೆಗೆ ಇದನ್ನ ಹಣ ಸಂಪಾದಿಸುವ ದಂಧೆಯಾಗಿ ಬಳಸಿಕೊಳ್ಳಲಾಗ್ತಿದೆ.
ಇದೀಗ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ ಘಟನೆ ವರದಿಯಾಗಿದೆ. ಹೌದು ಕಂಪಲಾಪುರದ ದಿನೇಶ್ ಕುಮಾರ್ ಎಂಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಕೃತ್ಯ ನಡೆದಿದೆ. ಇನ್ನೂ ಹನಿಟ್ರ್ಯಾಪ್ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಎ1 ಮೂರ್ತಿ, ಎ2 ಶಿವಣ್ಣ (ಪೊಲೀಸ್ ಸಿಬ್ಬಂದಿ), ಮತ್ತು ಇತರ ಮೂವರು ಎಂದು ಗುರುತಿಸಲಾಗಿದೆ.
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಶಿವಣ್ಣನಂತಹ ಪೊಲೀಸ್ ಸಿಬ್ಬಂದಿಯೊಬ್ಬರೇ ಈ ಅಪರಾಧದಲ್ಲಿ ಭಾಗಿಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಟ್ಟೆ ವ್ಯಾಪಾರಿಯನ್ನ ವಾಟ್ಸಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಐನಾತಿ ಯುವತಿ, ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಸಂದೇಶ ರವಾನೆ ಮಾಡಿದ್ದಾಳೆ. ಮೆಸೇಜ್ ನೋಡಿ ಆತುರಕ್ಕೆ ಬಿದ್ದ ವ್ಯಾಪಾರಿ ದಿನೇಶ್ ಕುಮಾರ್. ಚಿಕ್ಕಮ್ಮನ ಮನೆಗೆ ಬಂದಿದ್ದಾನೆ.
ರೂಮ್ ಒಳಗೆ ಇರುವಾಗಲೇ ಏಕಾಏಕಿ ಕೊಠಡಿ ಬೀಗ ಒಡೆದು ಒಳಪ್ರವೇಶ ಮಾಡಿದ ಐನಾತಿ ಆರೋಪಿಗಳಿಂದ ವ್ಯಾಪಾರಿ ದಿನೇಶ್ ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ. 10 ಲಕ್ಷ ರೂ. ಹಣ ನೀಡಿದರೆ ಬಿಟ್ಟು ಬಿಡುವುದಾಗಿ ಡಿಮ್ಯಾಂಡ್ ಮಾಡಿದ್ದು, ಪೊಲೀಸ್ ಪೇದೆ ಶಿವಣ್ಣನ ಸಹಾಯ ಪಡೆದ ಮೊದಲ ಆರೋಪಿ ಮೂರ್ತಿ ಹಾಗೂ ಯುವತಿಯೇ ಈ ಕೃತ್ಯದ ಮಾಸ್ಟರ್ ಮೈಂಡ್ ತಿಳಿದು ಬಂದಿದೆ. ಈ ಕೃತ್ಯದಿಂದ ಪೊಲೀಸ್ ಇಲಾಖೆಯೇ ಆಘಾತಕ್ಕೊಳಗಾಗಿದ್ದು, ಪಿರಿಯಾಪಟ್ಟಣ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.