ಆಂಧ್ರ:- ಆಂಧ್ರದ ಚಿತ್ತೂರಿನಲ್ಲಿ ಅಮಾನವೀಯ ಕೃತ್ಯಯೊಂದು ಬೆಳಕಿಗೆ ಬಂದಿದೆ. ಗಂಡ ಮಾಡಿದ 80,000 ರೂಪಾಯಿ ಸಾಲಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿ ಶಿಕ್ಷಿಸಿರುವ ಅಮಾನವೀಯ ಘಟನೆ ಜರುಗಿದೆ.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಗಂಡ ಸಾಲದ ಹಣ ವಾಪಸ್ ನೀಡಿಲ್ಲ ಎಂದು ಶ್ರೀಶಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿದ ದುರುಳರು ಅವಮಾನ ಮಾಡಿದ್ದಾರೆ. ಶ್ರೀಶಾ ಪತಿ ತಿಮ್ಮರಾಯಪ್ಪ 80 ಸಾವಿರ ರೂಪಾಯಿ ಹಣ ಸಾಲ ಪಡೆದು ಊರು ಬಿಟ್ಟು ಪರಾರಿಯಾಗಿದ್ದಾರೆ. ಕುಪ್ಪಂ ಮಂಡಲದ ನಾರಾಯಣಪುರ ಗ್ರಾಮದಲ್ಲಿ ಟಿಡಿಪಿ ಕಾರ್ಯಕರ್ತರೇ ಸಾಲದ ಹಣ ವಸೂಲಿಗಾಗಿ ಶ್ರೀಶಾಳನ್ನು ಮರಕ್ಕೆ ಕಟ್ಟಿ ನಿಂದಿಸಿದ್ದಾರೆ.
ಗಂಡ ಊರು ಬಿಟ್ಟು ಹೋದ ಮೇಲೆ ಶ್ರೀಶಾಳೇ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.