ನವದೆಹಲಿ: ಬೃಹತ್ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನವ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಯೋಜನೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದು ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ. ಬೃಹತ್ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ವಿಶ್ವ ಮಟ್ಟದಲ್ಲಿ ಎಲೆಕ್ಟ್ರಿಕ್ ಯೋಜನೆಗಳಿಗೆ ಭಾರತ ಹೆಸರುವಾಸಿ. 2024 ರಲ್ಲಿ ಈ ಯೋಜನೆ ಆರಂಭ ಮಾಡಲು ನಿರ್ಧರಿಸಿತ್ತು. ಈ ಯೋಜನೆಯಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈಗಾಗಲೇ 4,150 ಕೋಟಿಗಳನ್ನು ಹೂಡಿಕೆ ಮಾಡಲಾಗಿದೆ.
ನಿಮಗೆ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಲಿವರ್ ಕ್ಯಾನ್ಸರ್ ಬಂದಿದೆ ಎಂದರ್ಥ… ಕೂಡಲೇ ಡಾಕ್ಟರ್ ಭೇಟಿ ಮಾಡಿ!
ವರ್ಷಕ್ಕೆ 8 ಸಾವಿರ ವಾಹನಗಳ ಆಮದಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬೆನ್ಜ್, ಸ್ಕೋಡಾ, ಕಿಯಾ, ಕಂಪನಿಗಳು ಈ ಯೋಜನೆಗೆ ಆಸಕ್ತಿ ತೋರಿವೆ. ಇನ್ನೂ ಟೆಸ್ಲಾ 2 ಶೋ ರೂಮ್ ತೆರೆಯಲು ಆಸಕ್ತಿ ತೋರಿದೆ ಆದ್ರೆ, ಭಾರತದಲ್ಲಿ ಕಾರು ಉತ್ಪಾದನೆ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.
ಮುಂದುವರಿದು… ಯಾವುದೇ ಕಂಪನಿ ಕಾರು ತಯಾರಿಸಲು ಅವಕಾಶ ಇದೆ. ಮುಂದಿನ ಮೂರು ವರ್ಷಗಳ ಕಾಲ 15% ತೆರಿಗೆ ವಿನಾಯಿತಿ ನೀಡಲಾಗಿದೆ, ಈ ಕಾರ್ಯಕ್ರಮ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮುಂಗಡ ಹಣ ಕಟ್ಟಬೇಕು. ಒಂದು ವೇಳೆ ಬುಕ್ಕಿಂಗ್ ಮಾಡಿದ ಬಳಿಕ ಹಿಂದೇಟು ಹಾಕಿದ್ರೆ ಮುಂಗಡ ಹಣ ವಾಪಸ್ ನೀಡಲಾಗುವುದಿಲ್ಲ. ಲ್ಯಾಂಡ್ ಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.