ಕಲಬುರಗಿ : ಜನಿವಾರ ತೆಗೆಸಿ ಎಕ್ಸಾಮ್ ಬರೆಸಿರುವ ವಿಚಾರವಾಗಿ ಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಿಸಿದ ಪರೀಕ್ಷ ಕೇಂದ್ರ ಸಿಬ್ಬಂದಿ
ಕಲಬುರಗಿಯಲ್ಲಿ ಮಾತನಾಡಿದ ಅವರು, ಬೀದರ್ ವಿದ್ಯಾರ್ಥಿಗೆ ರೀ ಎಕ್ಸಾಮ್ ಕೊಡಬೇಕು. ಈ ಸರ್ಕಾರಕ್ಕೆ ಮನುಷ್ಯತ್ವ ಇದೇಯೋ ಇಲ್ಲವೋ ಗೊತ್ತಿಲ್ಲ. ಜನಿವಾರ ಬಿಚ್ಚಿ ಬಾ ಅಂದಿರೋದು ಯಾವ ಸಂಸ್ಕ್ರತಿ ಇದು. ಹಾಗಾದ್ರೆ ಇವರಿಗೆ ಬುರ್ಖಾ ಬಿಚ್ಚಿ ಬನ್ನಿ ಅಂತಾ ಹೇಳುವ ಧೈರ್ಯ ಇದ್ಯಾ..?, ಎಕ್ಸಾಮ್ ತಪ್ಪಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಎಕ್ಸಾಮ್ ಬರೆಯೋದಕ್ಕೆ ಕೋಡಬೇಕು. ಈ ಹಿಂದೆ ತಾಳಿ ಬಿಚ್ಚಿ ಎಕ್ಸಾಮ್ ಬರೆಸಿದವರು ಇವರು ಎಂದು ಕಿಡಿಕಾರಿದರು.