ಹುಬ್ಬಳ್ಳಿ:ಕನ್ನಡತನವನ್ನು ವಿಶ್ವ ವ್ಯಾಪಿ ವಿಜೃಂಬಿಸಿ ಎಲ್ಲಾ ಕನ್ನಡಿಗರ ಮನ ಗೆಲ್ಲುವುದೇ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಗುರಿಯಾಗಿದೆ ಈ ಕಾರ್ಯ ಸಾಧನೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎಂದು ಮಹಿಳಾ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಗಂಗಾಧರ ದೊಡ್ಡವಾಡ ಹೇಳಿದರು ಹಾವೇರಿ ನಗರದ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡ ಜಿಲ್ಲಾ ಘಟಕದ ರಚನಾ ಸಮಾರಂಭದಲ್ಲಿ ಮಾತನಾಡಿದರು ಹಾವೇರಿ ಜಿಲ್ಲೆಯಲ್ಲಿ ಜನ್ಮತಳೆದ ದಾರ್ಶನಿಕರು ಸಾಹಿತಿಗಳು ವಿವಿಧ ರಂಗಗಳ ಪ್ರತಿಭಾನ್ವಿತರು ಶತಶತಮಾನದಿಂದ ಸಾಧನೆಯ ಇತಿಹಾಸ ದಾಖಲಿಸಿದ್ದಾರೆ ಎಂದು ದಾನಮ್ಮದೇವಿ ದೇವಸ್ಥಾನದ ಸಂಸ್ಥಾಪಕರು ಹಾವೇರಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಾಗಾವಿ ಹೇಳಿದರು.
ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್!
ಮಹಿಳೆಯರನ್ನು ಮುನ್ನೆಲೆಗೆ ತರುವಲ್ಲಿ ಗಂಗಾಧರ ದೊಡ್ಡವಾಡ ರವರು ಅಭಿನವ ಬಸವಾದಿ ಶರಣರಾಗಿ ಬಂದಿದ್ದಾರೆ ಎಂದು ಶತಾಯುಷಿ ಹಿರಿಯ ಜಾನಪದ ಕಲಾವಿದೆ ಸಾಹಿತಿಯಾದ ಸಿದ್ದುಮತಿ ನೆಲವಿಗಿ ಹೇಳಿದರು ಎಲ್ಲಾ ಅಡ್ಡಿ ಆತಂಕಗಳನ್ನು ಹಿಂದೆ ಸರಿಸಿ ಮಹಿಳಾ ಸಾಹಿತ್ಯವನ್ನು ಜಗದಗಲ ಪಸರಿಸುವಂತೆ ಕಾರ್ಯಯೋನ್ಮುಖರಾಗೋಣವೆಂದು ಸಾಹಿತಿ ಮತ್ತು ರಾಷ್ಟ್ರೀಯ ಬಸವದಳದ ಮುಖ್ಯಸ್ಥೆ ಜಯಶ್ರೀ ಶಿವಪುರ ಹೇಳಿದರು ಇಂದು ಮಹಿಳೆಯರೇ ಬಹುಪಾಲು ಸಾಹಿತ್ಯ ಕೃಷಿಯಲ್ಲಿ ತೊಡಗಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದರೂ ಸಹ ಇಂದಿನ ಸಾಹಿತ್ಯ ಪರ ಸಂಘಟನೆಗಳಲ್ಲಿ ಮಹಿಳೆಯರನ್ನು ಅಲಕ್ಷಿಸುಲಾಗುತ್ತಿದೆ ಈ ಕಾರಣಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕವಾದ ವೇದಿಕೆಗೆ ನಮ್ಮ ಮಹಿಳಾ ಸಾಹಿತ್ಯ ಪರಿಷತ್ ರಚನೆಯಾಗಿದ್ದು ನಾವು ಬಲಾಢ್ಯವಾಗಿ ಕಟ್ಟುತ್ತೇವೆ ಎಂದು ಹಾವೇರಿ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಲೀಲಾವತಿ ಪಾಟೀಲ ಹೇಳಿದರು ಈ ಸಂದರ್ಭದಲ್ಲಿ, ಶ್ರೀಮತಿಯರಾದ ರೇಣುಕಾ ಗುಡಿಮನಿ ರಾಜೇಶ್ವರಿ ಬಿಸ್ಟನಗೌಡರ ದ್ಯಾಮವ್ವ ರಾಯರ ಶಾಂತಕ್ಕಾ ಮಡಿವಾಳರ ಶಿವಬಸವ್ವ ಲಕ್ಕಣ್ಣವರ ಶೈಲಜಾ ಮಳಶಂಕರಿಮಠ ಗೀತಾ ಚಿಕ್ಕಮಠ ಲೀಲಾವತಿ ಹಲಗಲಿ ನಾಗರತ್ನ ಲಕ್ಕಣ್ಣವರ ಹುಬ್ಬಳ್ಳಿ ತಾಲೂಕ ಸಂಘಟನಾ ಕಾರ್ಯದರ್ಶಿ ಅನ್ನಪೂರ್ಣ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.