ಚಾಮರಾಜನಗರ: ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ಕಳ್ಳರು ದಿನಸಿ ಅಂಗಡಿಗೆ ತಡರಾತ್ರಿ ನುಗ್ಗಿ ಕಳ್ಳತನ ಮಾಡಿದ್ದಲ್ಲದೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಹನೂರಿನ ಸಂತೋಷ್ ಎಂಬುವರಿಗೆ ಸೇರಿದ ಅಂಗಡಿಗೆ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ನುಗ್ಗಿದ್ದು, ಅಂಗಡಿಯೊಳಗಿನ ಕೆಲ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ, ಕೆಲ ದಿನಸಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ಶನಿವಾರ ಬೆಳಿಗ್ಗೆ 7 ಗಂಟೆಗೆ ಅಂಗಡಿ ತೆರೆಯಲು ಬಂದ ಅಂಗಡಿ ಮಾಲಿಕ ಸಂತೋಷ್ ಅವರಿಗೆ ಈ ಘಟನೆ ಗೊತ್ತಾಗಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದ್ದು, ಹೆಚ್ಚಿನ ನಷ್ಟವಾಗದಂತೆ ತಡೆಯಲಾಗಿದೆ. ಘಟನೆಯ ಬಗ್ಗೆ ಹನೂರು ಪೊಲೀಸರಿಗೆ ಅಂಗಡಿ ಮಾಲೀಕ ದೂರು ನೀಡಿದ್ದು ಸುಮಾರು 2 ಲಕ್ಷ ಮೌಲ್ಯದ ಸಾಮಗ್ರಿಗಳು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.