Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Vegetables Price Hike: ರಣ ಬಿಸಿಲಿನ ಮಧ್ಯೆ ಗಗನಕ್ಕೇರಿದ ತರಕಾರಿ ಬೆಲೆ..! ಚಿಕನ್, ಮೀನಿಗಿಂತನೂ ಬೀನ್ಸ್ ದುಬಾರಿ

    By AIN AuthorMay 1, 2024
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿ ದಿನ ತಾಪಮಾನ ಏರುತ್ತಲೇ ಇದ.. ಇದರಿಂದ ಕುಡಿಯುವದಕ್ಕೆ ಸರಿಯಾಗಿ ನೀರು ಸಿಗುತ್ತಿಲ್ಲ , ಇನ್ನು ತರಕಾರಿ, ಸೊಪ್ಪು, ಹಣ್ಣು ಬೆಳೆಸಬೇಕು ಅಂದ್ರೆ ರೈತರು ಪರದಾಡುವ ಪರಿಸ್ಥಿತಿ ಮುಂದಾಗಿದೆ.. ಇದರಿಂದ ಇದರಿಂದ ಜನರ ಜೇಬಿಗೆ ಕತ್ತರಿ ಬೀಳಲು ಶುರುವಾಗಿದೆ.. ಏರುತ್ತಲೇ ಇರುವ ತರಕಾರಿ ಬೆಲೆ ಜನರ ನಿತ್ಯದ ಜೀವನದಲ್ಲಿ ತಳಮಳಕ್ಕೆ ಕಾರಣವಾಗಿದೆ. ಅದ್ಯಾಕೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ..

    ಬೀನ್ಸ್, ಕ್ಯಾರೆಟ್, ಉರುಳಿಕಾಯಿ, ಬದನೆಕಾಯಿ, ದಪ್ಪ ಮೆಣಸಿನಕಾಯಿ ಎಲ್ಲಾ ಬೆಲೆ ದುಬಾರಿ.. ಈಗಾಗಲೇ ಒಂದು ಕೆಜಿ ತರಕಾರಿ ಕೊಳ್ಳುವಲ್ಲಿ ಅರ್ಧ ಕೇಜಿ ಖರೀದಿ ಮಾಡುವ ಸ್ಥಿತಿಗೆ ಗ್ರಾಹಕರು ಬಂದಿದ್ದಾರೆ. ರಾಜಧಾನಿಗೆ ರಾಮನಗರ, ಮಾಗಡಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ನಂದಗುಡಿ, ಕನಕಪುರ ಸೇರಿದಂತೆ ವಿವಿಧೆಡೆಯಿಂದ ಪೂರೈಕೆ ಆಗುವ ತರಕಾರಿ ಪ್ರಸ್ತುತ ಗಣನೀಯವಾಗಿ ಇಳಿಮುಖವಾಗಿದೆ.

    Bank holidays 2024 May: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್.! RBI ರಜಾಪಟ್ಟಿ ಹೀಗಿದೆ ನೋಡಿ

    ಬಿರುಬಿಸಿಲು, ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ಬತ್ತಿರುವುದು ತರಕಾರಿ ಬೆಳೆಗಳ ಇಳುವರಿ ತಗ್ಗಿಸಿದೆ. ಹೀಗಾಗಿ ಪೂರೈಕೆ ಕಡಿಮೆಯಾಗಿದೆ. ದಾವಣಗೆರೆ, ಪರರಾಜ್ಯಗಳಿಂದ ತರಕಾರಿ ಬರುತ್ತಿದ್ದು, ಸಾಗಾಟದ ವೆಚ್ಚದಿಂದ ಗ್ರಾಹಕರಿಗೆ ಬೆಲೆ ಇನ್ನಷ್ಟು ಹೊರೆಯಾಗಿಸುತ್ತಿವೆ. ಸಗಟು ಮಾರುಕಟ್ಟೆಯೂ ಬೆಲೆ ಏರಿಕೆಗೆ ನಲುಗಿದೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ವರ್ತಕ ರಾಜು ಹೇಳುತ್ತಾರೆ. ಬೀನ್ಸ್ ಬೆಳೆಯಲು ಹೆಚ್ಚಿನ ನೀರು ಬೇಕು.

    ಸದ್ಯದ ಬರ ಪರಿಸ್ಥಿತಿಯಲ್ಲಿ ಹೆಚ್ಚಿನದಾಗಿ ಬೀನ್ಸ್ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೆಲೆ ₹180 ರಿಂದ ₹200 ರವರೆಗೂ ಏರಿಕೆಯಾಗಿದೆ. ಸೊಪ್ಪು,‌ ಮೂಲಂಗಿ, ನವಿಲುಕೋಸು, ಹೀರೆಕಾಯಿ ಬೆಲೆಗಳು ಹೆಚ್ಚುತ್ತಿವೆ. ಸದ್ಯ ಕೇಜಿಗೆ ಇವುಗಳ ಬೆಲೆ ₹60 ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದರು. ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆ, ಇಳುವರಿ ಕುಂಠಿತ, ಬೇಡಿಕೆ ಕುಸಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ.

    ಯಾವ ತರಕಾರಿ ಎಷ್ಟು ದರ ಇದೆ ಅಂತ ನೋಡುವುದಾದರೆ..

    ಹುರುಳಿಕಾಯಿ ಕೆಜಿಗೆ 160 ರಿಂದ 200 ರೂ ತಲುಪಿದೆ,

    ಕ್ಯಾರೆಟ್‌ ಕೆಜಿಗೆ 80 ರೂಪಾಯಿ,

    ಟಮೋಟೋ ಕೆಜಿಗೆ 60 ರೂಪಾಯಿ,

    ಕ್ಯಾಪ್ಸಿಕಂ ಕೆಜಿಗೆ 120  ರೂಪಾಯಿ,

    ಆಲೂಗೆಡ್ಡೆ ಕೆಜಿಗೆ 60 ರೂಪಾಯಿ,

    ಬದನೆಕಾಯಿ ಕೆಜಿಗೆ 70 ರೂಪಾಯಿ,

    ಗೆಡ್ಡೆಕೋಸ್‌ ಕೆಜಿಗೆ 60 ರೂಪಾಯಿ

    ಸೌತೆಕಾಯಿ ಕೆಜಿಗೆ 50 ರೂಪಾಯಿ,

    ಬದನೆ ಕೆಜಿಗೆ 80 ರೂಪಾಯಿ,

    ನುಗ್ಗೆಕಾಯಿ ಕೆಜಿಗೆ 80 ರೂಪಾಯಿ.,

    ಬೆಳ್ಳುಳ್ಳಿ ಕೆಜಿಗೆ 250ರೂಪಾಯಿ.,

    ಹಾಗಲಕಾಯಿ ಕೆಜಿಗೆ 70 ರೂ.,

    ಬೆಂಡೆಕಾಯಿ ಕೆಜಿಗೆ 90 ರೂ.

    ಶುಂಠಿ ಪ್ರತಿ ಕೆಜಿಗೆ 160 ರೂಪಾಯಿ,

    ನಿಂಬೆಹಣ್ಣು ಹತ್ತು, ಎಂಬತ್ತು ರೂಪಾಯಿ.

    ಈ ನಡುವೆ ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಯಿಂದ ತರಕಾರಿ ತಂದು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ತಂದ ತರಕಾರಿಗಳು ಒಣಗಿ ಹೋಗುತ್ತವೆ. ಹಾಗಾಗಿ ಕೆಲ ದಿನ ಮಾರಾಟ ಮಾಡದಿರುವುದೆ ಒಳಿತು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ವರ್ಷ ಮಳೆ ಕಡಿಮೆ ಬಂದಿರುವುದರಿಂದ , ಪೂರೈಕೆ ಕಡಿಮೆ ಇರುವುದರಿಂದ ಹಾಗೂ ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಳ ಇರುವುದರಿಂದ ,  ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳ ಆಗಿದೆ , ಬೆಲೆ ಕೇಳಿ ಜನಸಾಮಾನ್ಯರು ಶಾಕ್ ಆಗುವಂತೆ ಆಗಿದೆ.

     

    Demo
    Share. Facebook Twitter LinkedIn Email WhatsApp

    Related Posts

    ಕ್ರಿಕೆಟ್ ಸಂಭ್ರಮದ ಕಾಲ್ತುಳಿತ ಕರ್ನಾಟಕ ಇತಿಹಾಸದ ಕರಾಳ ಅಧ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

    June 10, 2025

    ಸಿಎಂ ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕುಮಾರಸ್ವಾಮಿ

    June 10, 2025

    ಕಾಲ್ತುಳಿತ ಪ್ರಕರಣ: ಬೆಳ್ಳಂಬೆಳಗ್ಗೆ ದೆಹಲಿಗೆ ಹಾರಿದ ಸಿಎಂ, ಡಿಸಿಎಂ.. ಹೈಕಮಾಂಡ್ ಗೆ ದುರಂತದ ವರದಿ ಸಲ್ಲಿಕೆ!?

    June 10, 2025

    ಡಿಜಿಟಲ್ ಅರೆಸ್ಟ್ ನಿಂದ ಶ್ರೀಲಂಕಾದ ಕೆಸಿನೊ ಗೆ ಹಣ: ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವೀಲ್!

    June 10, 2025

    ಕಾಲ್ತುಳಿತದ ಡ್ಯಾಮೇಜ್: ಇಂದು ಸಿಎಂ-ಡಿಸಿಎಂ ದೆಹಲಿ ಪ್ರಯಾಣ.. ದುರಂತದ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ಸಲ್ಲಿಕೆ!

    June 10, 2025

    ಸರಣಿ ಅಪಘಾತ: 36ರ ಮಹಿಳೆ ಸ್ಥಳದಲ್ಲೇ ದುರ್ಮರಣ!

    June 10, 2025

    ಕಾಲ್ತುಳಿತ ಕೇಸ್: ಸರ್ಕಾರದ ವಿರುದ್ಧ ಹಲವು ಆರೋಪ..ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

    June 10, 2025

    ಕರ್ನಾಟಕದಲ್ಲಿ ನಾಳೆಯಿಂದ ಮಳೆ ಹೆಚ್ಚಳ ಸಾಧ್ಯತೆ: ಹವಾಮಾನ ಇಲಾಖೆ!

    June 10, 2025

    ಕೌಟುಂಬಿಕ ಕಲಹ: ಹೆಂಡ್ತಿ ಮನೆಬಿಟ್ಟು ಹೋಗಿದ್ದಕ್ಕೆ ಬೇಸತ್ತು ಪತಿ ಸೂಸೈಡ್!

    June 10, 2025

    ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ: ಹೈಕೋರ್ಟ್ ಗೆ DNA ಮಾಹಿತಿ!

    June 9, 2025

    ಇನ್ಮುಂದೆ ದೇವಸ್ಥಾನದಲ್ಲಿ ನೀರಿನ ಬಾಟಲಿ ಸೇರಿ ಪ್ಲಾಸ್ಟಿಕ್ ನಿಷೇಧ: ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

    June 9, 2025

    E- Khata: ಆಸ್ತಿದಾರರಿಗೆ ಮಹತ್ವದ ಮಾಹಿತಿ- ಕಟ್ಟಡ ನಕ್ಷೆ ಮಂಜೂರಾತಿ ನೀಡಲು ಜು.1 ರಿಂದ ಇ-ಖಾತಾ ಕಡ್ಡಾಯ: ಮಹೇಶ್ವರ್ ರಾವ್!

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.