ವಿಜಯನಗರ : ನಿಜವಾದ ಕಾಯಕಯೋಗಿಗಳೆಂದರೆ ಮುಸ್ಲಿಮರು ಎಂದು ಸಂಸದ ಈ ತುಕಾರಾಂ ಹೇಳಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಹಜ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಹಜ್ ಯಾತ್ರಿಗಳ ತರಬೇತಿ ಶಿಬಿರದಲ್ಲಿ ಸಂಸದ ತುಕಾರಾಂ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ಮುಸ್ಲಿಂರು ತಮ್ಮ ಕಾಯಕದಿಂದಲೇ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮನುಷ್ಯ ಧರ್ಮ ಪಾಲಿಸಬೇಕು ಎಂದು ಎಲ್ಲಾ ಶರಣರು, ಸಂತರು, ಪ್ರವಾದಿಗಳು ಹೇಳಿದ್ದಾರೆ. ಮನುಷ್ಯ ಧರ್ಮ ಪಾಲಿಸಬೇಕೆಂಬ ಸರ್ವಕಾಲಿಕ ಸತ್ಯವನ್ನ ನಾವೆಲ್ಲಾ ಪಾಲಿಸಬೇಕು. ನನಗೆ ಜನ್ಮ ನೀಡಿದ್ದು ತಂದೆ ತಾಯಿ. ಆದರೆ ನನ್ನ ರಾಜಕೀಯ ಜೀವನಕ್ಕೆ ನೀವೆಲ್ಲಾ ತಂದೆ ತಾಯಿ. ನಿಮ್ಮ ಒಲುಮೆ ಬೆಂಬಲದಿಂದಲೇ ನಾನು ಸಂಸದನಾಗಿದ್ದೇನೆ . ನನ್ನ ಪತ್ನಿ ಅನ್ನಪೂರ್ಣ ಸಂಸದೆಯಾಗಿದ್ದಾಳೆ. ನಿಮ್ಮ ಪರವಾಗಿ ನಾನು ಸದಾ ಧ್ವನಿ ಎತ್ತುತ್ತೇನೆ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಾನು ಮತ ಚಲಾಯಿಸಿದ್ದೇನೆ ಎಂದಿದ್ದಾರೆ.