ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲೊಂದು ಅಮಾನಿಯ ಘಟನೆ ನಡೆದಿದ್ದು, ಇದು ಪ್ರಾಣಿ ಪ್ರಿಯರು ನೋಡಲೇ ಬೇಕಾದ ಸುದ್ದಿಯಿದು.. ಬ್ಲಾಕ್ ಮ್ಯಾಜಿಕ್ ಮಾಡಿ ಶ್ವಾನ ಹತ್ಯೆ ಮಾಡಲಾಗಿದ್ದು, ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಯಿಯನ್ನು ಹತ್ಯೆ ಮಾಡಿದ ಹಿನ್ನೆಲೆ ಇಡೀ ಅಪಾರ್ಟ್ಮೆಂಟ್ ನ ತುಂಬೆಲ್ಲಾ ದುರ್ನಾತ ಬೀರಿದೆ.
ಎಸ್, ಮಹಾದೇವ ಪುರದ ಚಿನ್ನಪ್ಪ ಲೇಔಟ್ ನ ಅಕ್ಮೆ ಬೆಲ್ಲಾಟ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ಜರುಗಿದೆ. ವೆಸ್ಟ್ ಬೆಂಗಾಲ್ ಮೂಲದ ತ್ರಿಪಾರ್ಣ ಪಾಯ್ಕ ಮಹಿಳೆಯಿಂದ ಕೃತ್ಯ ನಡೆದಿದೆ. ನಾಯಿಯನ್ನು ನಾಲ್ಕು ದಿನಗಳ ಹಿಂದೆ ಕತ್ತು ಕೊಯ್ದು ಹತ್ಯೆ
ಮಾಡಿ ನಂತರ ನಾಯಿಯನ್ನು ಬಟ್ಟೆಯಿಂದ ಸುತ್ತಿಡಲಾಗಿದೆ.
ನಾಯಿಯ ಶವದ ಸುತ್ತ ಶ್ರೀ ಯಂತ್ರವನ್ನು ಬರೆಯಲಾಗಿದೆ.
ರೂಮಿನ ತುಂಬೆಲ್ಲಾ ದೇವರ ಪೋಟೊಗಳನ್ನ ಇಟ್ಟು ಪೂಜೆ ಮಾಡಲಾಗಿದೆ.
.
ಮಹಿಳೆಯು, ನಾಲ್ಕು ಲ್ಯಾಬ್ರೋಡರ್ ನಾಯಿಗಳನ್ನ ಸಾಕಿದ್ದಳು.ನಾಲ್ಕು ತಿಂಗಳ ಹಿಂದೆ ಒಂದು ನಾಯಿ ಕಾಣೆಯಾಗಿದೆ. ಒಂದು ನಾಯಿಯನ್ನು ಹತ್ಯೆ ಮಾಡಿದ್ದು, ಸಂಪೂರ್ಣ ಕೊಳತುಹೊಗಿದೆ.
ಮನೆಯ ಕಿಟಿಕಿ,ಬಾಗಿಲು ಗಳನ್ನ ಕ್ಲೋಸ್ ಮಾಡಲಾಗಿದ್ದು, ಇಡೀ ಅಪಾರ್ಟ್ಮೆಂಟ್ ಒಳಗಡೆ ದುರ್ನಾತ ಬಂದಿದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನೋಡಲಾಗಿದೆ. ನಾಯಿಯನ್ನು ಹತ್ಯೆ ಮಾಡಿ ಬಟ್ಟೆಯಲ್ಲಿ ಸುತ್ತಿಯಿಟ್ಟಿದ್ದಾಳೆ.
ಸದ್ಯ ನಾಯಿಯ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ನಾಲ್ಕು ದಿನಗಳ ಹಿಂದೆಯೇ ಹತ್ಯೆ ಮಾಡಿಲಾಗಿರುವುದು ಬೆಳಕಿಗೆ ಬಂದಿದೆ. ಮಹದೇವ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.