ಪಾಟ್ನಾ:- ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ನಿಂತಿಲ್ಲ ಎಂದು ಪಾಕಿಸ್ತಾನಕ್ಕೆ PM ನರೇಂದ್ರ ಮೋದಿ ಎಚ್ಚರಿಕೆ ಕೊಟ್ಟಿದ್ದಾರೆ.
ಶತ್ರುಗಳು ಆಪರೇಷನ್ ಸಿಂಧೂರ ಶಕ್ತಿಯನ್ನು ನೋಡಿದ್ದಾರೆ. ‘ಆಪರೇಷನ್ ಸಿಂಧೂರ’ ಭಾರತದ ಬತ್ತಳಿಕೆಯಿಂದ ಬಿಟ್ಟ ಕೇವಲ ಒಂದು ಬಾಣ ಅಷ್ಟೇ. ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ
ಭಯೋತ್ಪಾದನೆ ಮತ್ತೆ ತನ್ನ ಹೆಡೆಯನ್ನು ಎತ್ತಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ ಎಂದು ಹಾವಿಗೆ ಹೋಲಿಸಿ ಪ್ರಧಾನಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕರಕಟ್ನಲ್ಲಿ ಸುಮಾರು 50,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ರ್ಯಾಲಿಯನ್ನು ಉದ್ದೇಶಿಸಿ ಮೋದಿ ಈ ಮಾತುಗಳನ್ನಾಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯ ಒಂದು ದಿನದ ನಂತರ ನಾನು ಬಿಹಾರಕ್ಕೆ ಬಂದಿದ್ದೆ. ಅಲ್ಲಿ ನಮ್ಮ ಅನೇಕ ಸಹೋದರಿಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದರು. ಅಪರಾಧಿಗಳಿಗೆ ಅವರು ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು, ಭರವಸೆಯನ್ನು ಈಡೇರಿಸಿದ ನಂತರ ನಾನು ಬಿಹಾರಕ್ಕೆ ಮತ್ತೆ ಬಂದಿದ್ದೇನೆಂದು ತಿಳಿಸಿದ್ದಾರೆ.