ಬೆಂಗಳೂರು: ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ, ಅಧಿಕಾರ ಹಂಚಿಕೆಯ ಕುರಿತು ಭಾರೀ ಚರ್ಚೆ ಆಗ್ತಿದೆ. ಸೆಪ್ಟೆಂಬರ್ ಸಸ್ಪೆನ್ಸ್ ಬಗ್ಗೆ ಕೈ ಮುಖಂಡರು ನಾನಾ ಹೇಳಿಕೆ ನೀಡುತ್ತಿದ್ದಾರೆ. ಸಚಿವ ಕೆ ಎನ್ ರಾಜಣ್ಣ ಅವರ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇನ್ನೂ ಈ ವಿಚಾರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಕ್ರಾಂತಿ ಏನು ಅಂತ ರಾಜಣ್ಣಗೆ ಕೇಳಬೇಕು. ಯಾವುದೇ ಕ್ರಾಂತಿಯೂ ಆಗಲ್ಲ. ಸಿಎಂ ಸ್ಥಾನ ಬದಲಾವಣೆಯಂತೂ ಆಗುವುದೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!
ಸಿಎಂನ ಬದಲಾವಣೆ ಯಾರು ಮಾಡಬೇಕು ನಾವೇ ಅಲ್ವಾ? ನಾನೂ ಕೂಡ ಒಬ್ಬ ಓಟರ್, ಸಿಎಂ ಗೆ ಈಗಲೂ ಬಹುಮತ ಇದೆ. ಸಿದ್ದರಾಮಯ್ಯ ಗೆ ಇರುವಷ್ಟು ಜನ ಬೆಂಬಲ ಯಾರಿಗೂ ಇಲ್ಲ. ಆದರೆ ಸಿದ್ದರಾಮಯ್ಯ ನಾಟ್ ಎ ವೀಕ್ ಚೀಫ್ ಮಿನಿಸ್ಟರ್ ಎಂದು ಬ್ಯಾಟಿಂಗ್ ಮಾಡಿದರು.
ಪವರ್ ಸೆಂಟರ್ ಜಾಸ್ತಿ ಆಗಿವೆ ನಿಜ. ಸಿದ್ದರಾಮಯ್ಯಗೂ ವಯಸ್ಸಾಯ್ತಲ್ಲ. ಆದ್ರೆ ಸಿದ್ದರಾಮಯ್ಯ ನಾಟ್ ಎ ವೀಕ್ ಚೀಫ್ ಮಿನಿಸ್ಟರ್. ಕೆಲವೊಮ್ಮೆ ಇನ್ನೊಂದು ಪವರ್ ಸೆಂಟರ್ ಗಳ ಮಾತು ಕೇಳಬೇಕಾಗುತ್ತದೆ. ಆದರೆ 2 ವರ್ಷ 11 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಎಂದರು. ನಾವೆಲ್ಲ ಸಿಎಂ ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತೇವೆ. ಹಳೆಯ ಸ್ಟೈಲ್ ನಲ್ಲಿ ಆಡಳಿತ ಮಾಡಿ ಅಂತ ನಾವೂ ಹೇಳ್ತಿದ್ದೇವೆ ಎಂದು ತಿಳಿಸಿದರು.