ಕೊಪ್ಪಳ: ವಕ್ಫ್ ಬಿಲ್ ವಿರುದ್ದ ನಾಳೆ ದೇಶದಲ್ಲಿ ಅಶಾಂತಿ ಉಂಟಾಗಬಹುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ವಕ್ಫ್ ಬಿಲ್ ಸರಿಯಾಗಿ ಇಲ್ಲ ಅನಿಸ್ತಾ ಇದೆ. ಮುಸ್ಲಿಂ ಹಕ್ಕುಗಳನ್ನು ಧ್ವಂಸ ಮಾಡಲು ಹೊರಟಂತಿದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ಬಿಲ್ ವಿರುದ್ದ ನಾಳೆ ದೇಶದಲ್ಲಿ ಅಶಾಂತಿ ಉಂಟಾಗಬಹುದು.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ದೇಶದಲ್ಲಿ ಮುಸ್ಲಿಂರ ಸ್ಥಿತಿ ಹೀನಾಯವಾಗಿದೆ. ಬಹಳ ಬಡವರಿದ್ದಾರೆ. ಮೋದಿ ತಿಳಿದು ಮಾತಾಡ್ತಾರೋ ತಿಳಿಯದೆ ಮಾತಾಡ್ತಾರೋ ಗೊತ್ತಿಲ್ಲ. ದೇಶದಲ್ಲಿ 20 ಕೋಟಿ ಮೇಲೆ ಜನ ಇದಾರೆ. ಅವರ ಸ್ಥಿತಿ ಹೀನಾಯವಾಗಿದ್ದು, ಶಿಕ್ಷಣ ಕೇಳಲೇಬೇಡಿ. ತುಂಬಾ ಬಡವರು ಇದ್ದಾರೆ,ಅವರಿಗೆ ಕೊಟ್ಟರೇ ತಪ್ಪೇನು ಎಂದರು.
ರಾಜ್ಯದಲ್ಲಿ ಈಗ ಮಂಡನೆಯಾಗುತ್ತಿರುವುದು ಇದು ಜಾತಿಗಣತಿ ಅಲ್ಲ. ಅದು ಸಾಮಾಜಿಕ ಶೈಕ್ಷಣಿಕ ಆರ್ಥಿಕ ವಿಚಾರ ತಿಳಿಯಲು ಮಾಡಿದ ಸರ್ವೆ. ಅದರಲ್ಲಿ ಜಾತಿ ಕಾಲಂ ಸೇರಿಸಲಾಗಿದೆ. ಇದು ಸ್ವಾಗತಾರ್ಹ. ಇದು ಅತ್ಯಂತ ವೈಜ್ಞಾನಿಕವಾಗಿದೆ ಎಂದರು.