ಹುಬ್ಬಳ್ಳಿ: ಸಶಕ್ತ ಭಾರತ ಹಾಗೂ ಹಿಂದೂಗಳ ರಕ್ಷಣೆಗಾಗಿ ಮೂರನೇ ಯೋಜನೆ ಸಿದ್ದಪಡಿಸಿದ್ದು, ಕೋಟ್ಯಾಂತರ ಹಿಂದೂ ಕುಟುಂಬಗಳನ್ನು ಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪ್ರತಿಯೊಂದು ಓಣಿ, ಕಾಲನಿಯಲ್ಲಿ ಸಾಮೂಹಿಕ ಹನುಮಾನ ಚಾಲೀಸಾ ಪಠಣಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಡಾ. ಪ್ರವೀಣ ಭಾಯಿ ತೊಗಾಡಿಯಾ ಹೇಳಿದರು.
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಇಲ್ಲಿನ ಗೋಕುಲ ರಸ್ತೆಯ ಸಾಮ್ರಾಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದೂ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳ ಬಹುಸಂಖ್ಯಾತರಾದರೂ ಧರ್ಮದ ವಿಚಾರದಲ್ಲಿ ಸಂಘಟಿತರಾಗಿಲ್ಲ. ಹೀಗಾಗಿ ಸಶಕ್ತ ಭಾರತ, ಹಿಂದೂ ರಾಷ್ಟ್ರ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಮೂಡಿಸುವ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿದೆ. ಪ್ರತಿ ಶನಿವಾರ ರಾತ್ರಿ ೮ ರಿಂದ ೯ ಗಂಟೆಯವರೆಗೆ ಸಾಮೂಹಿಕ ಹನುಮಾನ ಚಾಲೀಸಾ ಪಠಣ ನಡೆಯಬೇಕು ಎಂದು ಸಂಕಲ್ಪ ತೊಟ್ಟಿದ್ದೇವೆ. ಈಗಾಗಲೇ ಕೆಲವೆಡೆ ಈ ಕಾರ್ಯ ನಡೆಯುತ್ತಿದೆ ಎಂದರು.
ಈ ಸಂಕಲ್ಪವು ಧಾರ್ಮಿಕವಾಗಿ ಜಾಗೃತಗೊಳಿಸುವುದರದ ಜೊತೆಗೆ ಹಿಂದುತ್ವದ ಬಗ್ಗೆ ಪ್ರೀತಿ ಹಾಗೂ ಒಗ್ಗೂಡಿಸುವುದಾಗಿದೆ. ಇದರೊಂದಿಗೆ ಹಿಂದೂಗಳ ಸಮಸ್ಯೆಗಳಿಗೆ ಧ್ವನಿಯಾಗುವುದು, ಅದರ ವಿರುದ್ದ ಬೀದಿಗಿಳಿಯುವುದು, ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ, ಶೈಕ್ಷಣಿಕ ನೆರವು, ಉಚಿತ ವೈದ್ಯಕೀಯ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಹಿಂದೂಗಳಿಗೆ ಉಚಿತವಾಗಿ ನೀಡುವುದಾಗಿದೆ. ನಾವು ಹಿಂದೆ ರೂಪಿಸಿದ ಯಾವುದೇ ಎರಡು ಪ್ರಮುಖ ಯೋಜನೆಗಳು ಸಫಲಗೊಂಡಿದ್ದು, ಇದು ಕೂಡ ಯಶಸ್ವಿಯಾಗಲಿದೆ. ಇದಕ್ಕಾಗಿ ಪ್ರತಿಯೊಬ್ಬರ ಹಿಂದೂ ಸಂಕಲ್ಪ ತೊಡಬೇಕು ಎಂದರು ಹೇಳಿದರು.