ಬೆಂಗಳೂರು:- ಈ ಕಾಂಗ್ರೆಸ್ ನವರು ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂತಿದ್ದೀರಾ!? ಹಾಗಿದ್ರೆ ಇಷ್ಟೆಲ್ಲಾ ಬೆನಿಫಿಟ್ ಗ್ಯಾರಂಟಿ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಅಷ್ಟೇ ಅಲ್ಲ.. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಮನೆಗೆ ವಾಪಸ್ ಹೋಗುವ ಗ್ಯಾರಂಟಿ ಇಲ್ಲ. ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ ಎಂದರು.
ಗೃಹ ಸಚಿವರೇ ಮಾಫಿಯಾ ಕೈಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಅವರು ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದರು. ಬಳಿಕ ಅವರು ಬಂದು ನಮ್ಮ ಹುಡುಗರನ್ನ ಕೊಂದ್ರು. ಈಗ ಹುಬ್ಬಳ್ಳಿ ಗಲಭೆ ಕೇಸ್ ಆರೋಪಿಗಳ ಕೇಸ್ ವಾಪಸ್ ಪಡೆಯಲು ಹೊರಟಿದ್ರು. ಹೈಕೋರ್ಟ್ ಅದಕ್ಕೆ ತಡೆ ಕೊಟ್ಟಿದೆ ಸ್ವಾಗತ ಮಾಡ್ತೀನಿ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳ್ತಾರೆ ಮುಸ್ಲಿಮರಿಗೆ ರಕ್ಷಣೆ ಇಲ್ಲ ಅಂತಾ. ಏನು ಮಾಡಲು ಹೊರಟಿದ್ದೀರಾ ನೀವು!? ಮೊದಲು ಬಿಹಾರವನ್ನ ಗೂಂಡಾ ರಾಜ್ಯ ಅಂತಿದ್ರು. ಕರ್ನಾಟಕವನ್ನ ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ದಕ್ಷಿಣ ಕನ್ನಡದವರಿಗೆ ಹೊಟ್ಟೆ ಬಟ್ಟೆಗೆ ಕಾಂಗ್ರೆಸ್, ಮತ ಬೇರೆ ಪಕ್ಷಕ್ಕೆ ಹಾಕುತ್ತಾರೆ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ದಕ್ಷಿಣ ಕನ್ನಡದವರು ಕರ್ನಾಟಕದಲ್ಲಿ ಇಲ್ಲ ಅಂತಾ ಅರ್ಥವೇ? ಏನು ಅಂತಾ ಮಾತಾಡುತ್ತಾರೆ? ಅಂದರೆ ಮತ ಹಾಕಿದವರಿಗೆ ಮಾತ್ರ ಅಂತಾನಾ? ಕಾಂಗ್ರೆಸ್ ನವರಿಗೆ ಮಾತ್ರ ಗ್ಯಾರಂಟಿ ಅಂತಾ ಅವತ್ತೇ ಹೇಳಬೇಕಿತ್ತು. ಅವತ್ತು ನಿನಗೂ ಫ್ರೀ ನನಗೂ ಫ್ರೀ ಅಂತಾ ಹೇಳಿದ್ದರಲ್ವಾ? ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕತೆಯ ಕೂಗು ಇರುವಾಗ ಇವರು ಜವಾಬ್ದಾರಿ ಇಲ್ಲದೇ ಮಾತಾಡುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದ್ದಾರೆ.