ಬೆಂಗಳೂರು: ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಮಾತಾಡಿದಾಗ ಖಂಡಿಸಬೇಕು ಎಂದು ಶಾಸಕ ರವಿ ಗಣಿಗ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ.
ವಾಣಿಜ್ಯ ಮಂಡಳಿಯಿಂದ ಬೆಣ್ಣೆ ಹಚ್ಚುವ ಮಾತು ಬೇಡ. ಕೂಡಲೇ ಸಿನಿಮಾ ಬ್ಯಾನ್ ಮಾಡಲಿ. ಇಲ್ಲದೆ ಹೋದರೆ ಸರ್ಕಾರ ಅವರ ಸಿನಿಮಾ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!
ರಮ್ಯ, ಶಿವರಾಜ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ ಎಂದು ಗೊತ್ತಿಲ್ಲ. ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಮಾತನಾಡಿದಾಗ ಅದನ್ನ ಖಂಡಿಸಬೇಕು. ಮೊದಲು ನಟರು ಬೆಣ್ಣೆ ಹಚ್ಚುವುದನ್ನು ಬಿಡಬೇಕು. ದರ್ಶನ್ ಖಂಡಿಸಿರುವುದನ್ನು ನೋಡಿದ್ದೇನೆ. ಬೇರೆಯವರು ಅದಕ್ಕೆ ಟಾಂಗ್ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.