ಬೆಳಗಾವಿ : ಆಸ್ಪತ್ರೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಯ ಕಾರನ್ನೇ ಜಪ್ತಿ ಮಾಡಲಾಗಿದೆ. ಮೂರು ಜನ ರೈತರಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಈ ಆದೇಶ ನೀಡಿದೆ.
ಸುಮಾರು 60 ವರ್ಷದ ಹಿಂದೆ ಜಮೀನು ಕಳೆದುಕೊಂಡಿದ್ದ ರೈತ ಫಕ್ಕೀರಪ್ಪ ತಳವಾರ, ಮಲ್ಲಿಕಾರ್ಜುನ ತಳವಾರ, ಅಶೋಕತಾಯಿ ತಳವಾರ ಎಂಬ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಮೂವರು ರೈತರು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಡಿಎಚ್ಒ ಕಾರು ಜಪ್ತಿ ಮಾಡುವಂತೆ ಆದೇಶ ನೀಡಿತ್ತು.
ಕೋರ್ಟ್ ಆದೇಶದ ಹಿನ್ನೆಲೆ ರೈತರು ವಕೀಲರ ಸಮೇತ ಕಾರು ಜಪ್ತಿಗೆ ಬಂದಿದ್ದರು. ಜಪ್ತಿಗೆ ಬರ್ತಿದ್ದಂತೆ ಡ್ರೈವರ್ ಕಾರು ತಗೊಂಡು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಅಧಿಕಾರಿಗಳಿಗೆ ವಕೀಲ ಆರ್.ಎನ್ ಪಾಟೀಲ್ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಆ ಬಳಿಕ ಸಿಬ್ಬಂದಿ ಕಾರು ತಂದು ಕೊಟ್ಟಿದ್ದಾರೆ.