ಮೈಸೂರು:- ಸಫಾರಿ ವಾಹನದ ಮುಂದೆ ಹುಲಿ ಕಾಣಿಸಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ಜರುಗಿದೆ. ಕಬಿನಿ ಹಿನ್ನೀರಿನ ದಮ್ಮನಕಟ್ಟೆ ರೇಂಜ್ ಮಗ್ಗೆ ಈಪಿಟಿಯ ಮೊದಲನೇ ಕೆರೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ.
ಅನುಪ್ ರವಿಶಂಕರ್ ರವರ ಕ್ಯಾಮೆರಾದಲ್ಲಿ ಹುಲಿಯ ದೃಶ್ಯ ಸೆರೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಮಳೆಗೆ ಹೆದರದೆ ಕೆರೆಯಲ್ಲಿ ಕುಳಿತ ಹುಲಿಯ ದೃಶ್ಯ ಕಂಡು ಪ್ರವಾಸಿಗರು ಪುಲ್ ಖುಷ್ ಆಗಿದ್ದಾರೆ.
ಮಳೆಯಲ್ಲಿ ಹುಲಿರಾಯನ ಆಟ ಕಂಡು ಪ್ರವಾಸಿಗರು ಫಿದಾ ಆದರು. ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನಲ್ಲಿ ಆಟ
ದಮ್ಮನಕಟ್ಟೆ ಸಫಾರಿ ವೇಳೆ ಸಾರ್ವಜನಿಕರಿಗೆ ಹುಲಿರಾಯ ದರ್ಶನ ಕೊಟ್ಟಿದ್ದಾನೆ. ಈ ವೇಳೆ ಸಾರ್ವಜನಿಕರು ಹುಲಿಯ ಫೋಟೋ, ವಿಡಿಯೋ ತೆಗೆಯುವಲ್ಲಿ ನಿರತರಾಗಿದ್ದಾರೆ.