ಚಾಮರಾಜನಗರ : ಗ್ರಾಮದ ಸಮೀಪದ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಚಾಮರಾಜನಗರ ಜಿಲ್ಲೆಯ ಕಾಳಹುಂಡಿ ಗ್ರಾಮದ ಸಮೀಪದ ಕಟೇಪುರ ಬಳಿ ಹುಲಿ ಪ್ರತ್ಯಕ್ಷವಾಗಿದೆ.
ಕಳೆದ ಒಂದು ವಾರದ ಹಿಂದೆ ಗಟ್ಟವಾಡಿ ಹಾಗೂ ಕವಲಂದೆ ಬಳಿ ಭಾರೀ ಗಾತ್ರದ ಹುಲಿ ಕಾಣಿಸಿಕೊಂಡಿತ್ತು. ಇದೀಗ ಕಾಳನಹುಂಡಿ ಸಮೀಪ ಹುಲಿ ಪ್ರತ್ತಕ್ಷವಾಗಿದೆ.
ಗ್ರಾಮದ ಸುತ್ತಾಮುತ್ತಲಿನ ರೈತ ಸಮುದಾಯ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಅಲ್ಲದೇ ಹುಲಿಗಳನ್ನು ಹಿಡಿಯದೇ ಕೈಕಟ್ಟಿ ಕುಳಿತ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.