ನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ.
ಬಿಗ್ ಶಾಕ್: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಜೂ. 16ರಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ!
ಏಕೆಂದರೆ ಇದು ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ ಎಂದು. ನಮ್ಮ ಜೀರ್ಣಶಕ್ತಿ ಹೆಚ್ಚಿಸಿ ಅಜೀರ್ಣತೆಯನ್ನು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ ವೀಳ್ಯದೆಲೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ
ವೀಳ್ಯದೆಲೆಗಳನ್ನು ಜೇನುತುಪ್ಪ, ಸುಣ್ಣ ಅಥವಾ ಅಡಿಕೆ ಜೊತೆ ಅಗಿಯುವುದು ಭಾರತದಲ್ಲಿ ಒಂದು ಸಂಪ್ರದಾಯವಾಗಿದೆ. ಇದನ್ನು ತಾಂಬೂಲ ಎಂದೂ ಕರೆಯುತ್ತಾರೆ. ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನೂ ಹೆಚ್ಚಿಸುತ್ತದೆ. ಮಲಬದ್ಧತೆಯಿಂದ ಪರಿಹಾರ ಪಡೆಯಲು, ರಾತ್ರಿಯಿಡೀ ವೀಳ್ಯದ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಬಾಯಿಯ ಆರೋಗ್ಯ ಸುಧಾರಿಸುತ್ತದೆ: ವೀಳ್ಯದೆಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.
ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ: ವೀಳ್ಯದೆಲೆಗಳನ್ನು ಶ್ವಾಸಕೋಶ, ಎದೆಯ ಅಸ್ವಸ್ಥತೆ ಮತ್ತು ಆಸ್ತಮಾದ ಲಕ್ಷಣಗಳನ್ನು ನಿವಾರಿಸಲು ಮತ್ತು ಗುಣಪಡಿಸಲು ಬಳಸಲಾಗುತ್ತದೆ. ಸಾಸಿವೆ ಎಣ್ಣೆಯನ್ನು ವೀಳ್ಯದ ಎಲೆಗೆ ಹಚ್ಚಿ ಸ್ವಲ್ಪ ಹೊತ್ತು ಎದೆಯ ಮೇಲೆ ಇಡುವುದರಿಂದ ಎದೆಯ ಅಸ್ವಸ್ಥತೆ ಕಡಿಮೆಯಾಗುತ್ತದೆ.
ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ: ಪುಡಿಮಾಡಿದ ವೀಳ್ಯದೆಲೆಯ ಪೇಸ್ಟ್ ಅನ್ನು ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ತ್ವರಿತ ಪರಿಹಾರ ದೊರೆಯುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ: ಮಧುಮೇಹ ರೋಗಿಗಳು ಸಹ ವೀಳ್ಯದೆಲೆಗಳನ್ನು ಸೇವಿಸುವುದರಿಂದ ತಮ್ಮ ಮಧುಮೇಹವನ್ನು ನಿಯಂತ್ರಿಸಬಹುದು.
ಕ್ಯಾನ್ಸರ್ ವಿರೋಧಿ ಗುಣಗಳು: ಕೆಲವು ಅಧ್ಯಯನಗಳ ಪ್ರಕಾರ, ವೀಳ್ಯದೆಲೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ವೀಳ್ಯದೆಲೆ ತಡೆಯುತ್ತದೆ. ಇದಲ್ಲದೆ, ಹೊಟ್ಟೆ ಉಬ್ಬರಕ್ಕೆ ವೀಳ್ಯದ ಎಲೆಗಳನ್ನು ಸೇವಿಸಬಹುದು. ವೀಳ್ಯದೆಲೆ ರಸಕ್ಕೆ ಸ್ವಲ್ಪ ತುಳಸಿ ರಸ ಬೆರೆಸಿ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ವೀಳ್ಯದೆಲೆ ರಸ ಕುಡಿದರೆ ಕಿಡ್ನಿ ಸ್ಟೋನ್ ಕರಗಲು ಸಹಾಯಕವಾಗಿದೆ.
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೀಳ್ಯದೆಲೆ ತಿನ್ನಬಾರದು. ಇದು ಅವರಿಗೂ ಅವರ ಮಕ್ಕಳಿಗೂ ಹಾನಿ ಮಾಡಬಹುದು. ವೀಳ್ಯದ ಎಲೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಅಪಾಯಕಾರಿ.
ವೀಳ್ಯದ ಎಲೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದೊತ್ತಡ ಇರುವವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವೀಳ್ಯದ ಎಲೆಗಳು ಹೊಟ್ಟೆಯ ಉರಿಯೂತಕ್ಕೆ ಕಾರಣವಾಗಬಹುದು. ಇದು ಹೊಟ್ಟೆಯ ಹುಣ್ಣು ಇರುವವರಿಗೆ ನೋವನ್ನು ಹೆಚ್ಚಿಸುತ್ತದೆ.