Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ.

    ಬಿಗ್ ಶಾಕ್: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಜೂ. 16ರಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ!

    ಏಕೆಂದರೆ ಇದು ನಾವು ಸೇವಿಸಿದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ ಎಂದು. ನಮ್ಮ ಜೀರ್ಣಶಕ್ತಿ ಹೆಚ್ಚಿಸಿ ಅಜೀರ್ಣತೆಯನ್ನು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ದೂರ ಮಾಡುವಲ್ಲಿ ವೀಳ್ಯದೆಲೆ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ

    ವೀಳ್ಯದೆಲೆಗಳನ್ನು ಜೇನುತುಪ್ಪ, ಸುಣ್ಣ ಅಥವಾ ಅಡಿಕೆ ಜೊತೆ ಅಗಿಯುವುದು ಭಾರತದಲ್ಲಿ ಒಂದು ಸಂಪ್ರದಾಯವಾಗಿದೆ. ಇದನ್ನು ತಾಂಬೂಲ ಎಂದೂ ಕರೆಯುತ್ತಾರೆ. ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನೂ ಹೆಚ್ಚಿಸುತ್ತದೆ. ಮಲಬದ್ಧತೆಯಿಂದ ಪರಿಹಾರ ಪಡೆಯಲು, ರಾತ್ರಿಯಿಡೀ ವೀಳ್ಯದ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

    ಬಾಯಿಯ ಆರೋಗ್ಯ ಸುಧಾರಿಸುತ್ತದೆ: ವೀಳ್ಯದೆಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

    ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ: ವೀಳ್ಯದೆಲೆಗಳನ್ನು ಶ್ವಾಸಕೋಶ, ಎದೆಯ ಅಸ್ವಸ್ಥತೆ ಮತ್ತು ಆಸ್ತಮಾದ ಲಕ್ಷಣಗಳನ್ನು ನಿವಾರಿಸಲು ಮತ್ತು ಗುಣಪಡಿಸಲು ಬಳಸಲಾಗುತ್ತದೆ. ಸಾಸಿವೆ ಎಣ್ಣೆಯನ್ನು ವೀಳ್ಯದ ಎಲೆಗೆ ಹಚ್ಚಿ ಸ್ವಲ್ಪ ಹೊತ್ತು ಎದೆಯ ಮೇಲೆ ಇಡುವುದರಿಂದ ಎದೆಯ ಅಸ್ವಸ್ಥತೆ ಕಡಿಮೆಯಾಗುತ್ತದೆ.

    ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ: ಪುಡಿಮಾಡಿದ ವೀಳ್ಯದೆಲೆಯ ಪೇಸ್ಟ್ ಅನ್ನು ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ತ್ವರಿತ ಪರಿಹಾರ ದೊರೆಯುತ್ತದೆ.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ವೀಳ್ಯದೆಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಮಧುಮೇಹವನ್ನು ನಿಯಂತ್ರಿಸುತ್ತದೆ: ಮಧುಮೇಹ ರೋಗಿಗಳು ಸಹ ವೀಳ್ಯದೆಲೆಗಳನ್ನು ಸೇವಿಸುವುದರಿಂದ ತಮ್ಮ ಮಧುಮೇಹವನ್ನು ನಿಯಂತ್ರಿಸಬಹುದು.

    ಕ್ಯಾನ್ಸರ್ ವಿರೋಧಿ ಗುಣಗಳು: ಕೆಲವು ಅಧ್ಯಯನಗಳ ಪ್ರಕಾರ, ವೀಳ್ಯದೆಲೆ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ವೀಳ್ಯದೆಲೆ ತಡೆಯುತ್ತದೆ. ಇದಲ್ಲದೆ, ಹೊಟ್ಟೆ ಉಬ್ಬರಕ್ಕೆ ವೀಳ್ಯದ ಎಲೆಗಳನ್ನು ಸೇವಿಸಬಹುದು. ವೀಳ್ಯದೆಲೆ ರಸಕ್ಕೆ ಸ್ವಲ್ಪ ತುಳಸಿ ರಸ ಬೆರೆಸಿ ತಿಂದರೆ ಕಿಡ್ನಿ ಸ್ಟೋನ್‌ ಉಂಟಾಗುವುದಿಲ್ಲ. ವೀಳ್ಯದೆಲೆ ರಸ ಕುಡಿದರೆ ಕಿಡ್ನಿ ಸ್ಟೋನ್‌ ಕರಗಲು ಸಹಾಯಕವಾಗಿದೆ.

    ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ವೀಳ್ಯದೆಲೆ ತಿನ್ನಬಾರದು. ಇದು ಅವರಿಗೂ ಅವರ ಮಕ್ಕಳಿಗೂ ಹಾನಿ ಮಾಡಬಹುದು. ವೀಳ್ಯದ ಎಲೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಅಪಾಯಕಾರಿ.

    ವೀಳ್ಯದ ಎಲೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದೊತ್ತಡ ಇರುವವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವೀಳ್ಯದ ಎಲೆಗಳು ಹೊಟ್ಟೆಯ ಉರಿಯೂತಕ್ಕೆ ಕಾರಣವಾಗಬಹುದು. ಇದು ಹೊಟ್ಟೆಯ ಹುಣ್ಣು ಇರುವವರಿಗೆ ನೋವನ್ನು ಹೆಚ್ಚಿಸುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ನೀವು ಊಟ ಮಾಡುವಾಗಲೂ ಹೆಚ್ಚು ಕೂದಲು ಸಿಗುತ್ತಾ!? ಹಾಗಿದ್ರೆ ಈ ಸಮಸ್ಯೆಗಳಿರುವುದು ಫಿಕ್ಸ್!

    June 12, 2025

    ಈ ಆಹಾರ ಅಪ್ಪಿತಪ್ಪಿಯೂ ಸೇವಿಸಬೇಡಿ: ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು!

    June 12, 2025

    ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!

    June 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.