ಬೆಳಗಾವಿ:- ಎಣ್ಣೆ ಏಟಲ್ಲಿ ಚರಂಡಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ನಾಪತ್ತೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಜರುಗಿದೆ
ವಾಹನ ತಪಾಸಣೆ ವೇಳೆ ದುರಂತ: ಲಾರಿ ಹರಿದು ಪೊಲೀಸ್ ಕಾನ್ಸ್ಟೇಬಲ್ ಸಾವು!
ಕಾಶಪ್ಪ ಗೋಕಾಕದ ಗೊಲ್ಲರ ಒಣಿಯ ನಿವಾಸಿಯಾಗಿರುವ ಕಾಶಪ್ಪ ಶಿರಟ್ಟಿ,(52) ಚರಂಡಿ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ. ನಿರಂತರ ಮಳೆ ಹಿನ್ನೆಲೆ ಚರಂಡಿಯಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಧಾರಾಕಾರ ಸುರಿದ ಮಳೆಯಿಂದ ಚರಂಡಿಗಳು ತುಂಬಿ ಹರಿಯುತ್ತಿದೆ. ಈ ವೇಳೆ ಕಾಲು ಜಾರಿ ಚರಂಡಿಯಲ್ಲಿ ಬಿದ್ದ ಕಾಶಪ್ಪ ಶಿರಟ್ಟಿ ಕೊಚ್ಚಿ ಹೋಗಿದ್ದಾನೆ.
ಪೊಲಿಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿಗಳಿಂದ ಹುಡುಕಾಟ ನಡೆಸಿದ್ದಾರೆ.ಚರಂಡಿಯೊಳಗೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ ಕೈಗೊಂಡಿದ್ದಾರೆ. ಜೆಸಿಬಿಯಿಂದ ನಗರಸಭೆ ಅಧಿಕಾರಿಗಳು, ಪುಟ್ ಪಾತ ತೆರವುಗೊಳಿಸುತ್ತಿದ್ದಾರೆ.
AIN NEWS ಬಾಳಪ್ಪ ತೇರದಾಳ ಬೆಳಗಾವಿ.