ಚಿತ್ರದುರ್ಗ:- ಜೋರು ಗಾಳಿಗೆ ಕಟ್ಟಡ ಮೇಲಿದ್ದ ಟವರ್ ನೆಲಕ್ಕುರುಳಿದ ಘಟನೆ ಚಿತ್ರದುರ್ಗ ನಗರದ ಕೊಳಗೋಟೆಯಲ್ಲಿ ಜರುಗಿದೆ.
ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ: ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ!
ಟವರ್ ಶೀಟ್ ಬಿದ್ದ ಪರಿಣಾಮ ಮನೆಗೆ ಹಾನಿ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಟವರ್ ಬಿದ್ದ ರಭಸಕ್ಕೆ ಮನೆಯ ಶೀಟ್ ಗಳು ಪುಡಿಪಡಿ ಆಗಿ ಮನೆಯೊಳಗಿದ್ದ ವಸ್ತುಗಳಿಗೆ ಹಾನಿ ಆಗಿದೆ.
ಮರ್ಚೆಂಟ್ ಬ್ಯಾಂಕ್ ಕಟ್ಟಡದ ಮೇಲ್ಚಾವಣಿಯಲ್ಲಿ ಟವರ್ ನಿರ್ಮಿಸಲಾಗಿತ್ತು. ಟವರ್ ಬಿದ್ದ ಪರಿಣಾಮ ಮಾಯಪ್ಪ ಎಂಬುವವರ ಮನೆಗೆ ಹಾನಿ ಆಗಿದ್ದು, ಕೂಡಲೇ ಮರ್ಚೆಂಟ್ ಬ್ಯಾಂಕ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.