ಹಾಸನ:- ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟಲು ಹೋಗಿ ದುರಂತ ಸಂಭವಿಸಿದ್ದು, ವಿದ್ಯುತ್ ಶಾಕ್ ಗೆ ಇಬ್ಬರು ರೈತರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೋಕಿನ ಶೆಟ್ಟಿಕೊಪ್ಪಲು ಗ್ರಾಮದಲ್ಲಿ ಜರುಗಿದೆ.
ಮನೆಯೊಂದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಹಾಕಲಾಗಿದ್ದ ವಯರ್ ನಿಂದ ಕರೆಂಟ್ ಪ್ರವಹಿಸಿದೆ. ಹಾಳಾಗಿದ್ದ ವಿದ್ಯುತ್ ಲೈನ್ ಗಮನಿಸದೆ ಅವಘಡ ಸಂಭವಿಸಿದೆ. ಚಗಚೆಗೆರೆ ಗ್ರಾಮದ ಬಾಳೆಗೌಡ (73 ), ಕುಡುಕುಂದಿ ಗ್ರಾಮದ ಹೊಂಬೆಗೌಡ (55) ಮೃತ ದುರ್ದೈವಿಗಳು.
ತಮ್ಮ ತೋಟದ ಮನೆ ಬಳಿ ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟಲು ಮುಂದಾದಾಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ರೈತರು ಸಾವಿಗೀಡಾಗಿದ್ದಾರೆ.
ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.