ಸನಾತನ ಧರ್ಮದಲ್ಲಿ ಪ್ರತಿ ದಿನವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆ ದಿನ ಹನುಮಂತನನ್ನು ಪೂಜಿಸುವುದರಿಂದ ಶುಭಫಲಗಳು ಲಭಿಸುತ್ತದೆ ಎಂದು ನಂಬಲಾಗಿದೆ.
ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನಾವು ಇವುಗಳನ್ನು ಮಾಡುವುದರಿಂದಲೂ ಶನಿ ದೋಷ ಹಾಗೂ ಶನಿ ದೇವನು ನಮಗೆ ನೀಡುವಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುವುದು. ಮಂಗಳವಾರದ ದಿನದಂದು ಸಂಜೆ ನಾವು ಯಾವ ಕೆಲಸಗಳನ್ನು ಮಾಡಿದರೆ ಶನಿ ಸಮಸ್ಯೆಗಳು ಪರಿಹಾರವಾಗುವುದು.? ಮಂಗಳವಾರ ದಿನದಂದು ಸಂಜೆ ನೀವು ಇವುಗಳನ್ನು ಮಾಡಿ.
ಮಂಗಳವಾರದ ದಿನದಂದು ಶನಿ ಮಂತ್ರವನ್ನು ಪಠಿಸುವುದು ನಿಮಗೆ ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ. ಮಂಗಳವಾರದ ದಿನದಂದು ಸಂಜೆ ಸಂಪೂರ್ಣವಾಗಿ ಶುದ್ಧರಾಗಿ ಒಂದು ಶಾಂತವಾದ ಸ್ಥಳದಲ್ಲಿ ಕುಳಿತು ಸಂಪೂರ್ಣ ಏಕಾಗ್ರತೆಯಿಂದ ಈ ಎರಡು ಶನಿ ಮಂತ್ರಗಳಲ್ಲಿ ಯಾವುದಾದರೊಂದು ಶನಿ ಮಂತ್ರವನ್ನು 108ಬಾರಿ ಪಠಿಸಬೇಕು.
<span;>- ಓಂ ಶಂ ಶನೈಶ್ಚರಾಯ ನಮಃ
<span;>- ಓಂ ಪ್ರಾಂ ಪ್ರೀಂ ಪ್ರೌಂ
ಸಃ ಶನೈಶ್ಚರಾಯ ನಮಃ ಈ ಶನಿ ಮಂತ್ರವನ್ನು ನೀವು ಸರಿಯಾದ ವಿಧಿ – ವಿಧಾನಗಳ ಪ್ರಕಾರ ಪಠಿಸಬೇಕು. ಈ ಮಂತ್ರವನ್ನು ಪಠಿಸುವಾಗ ನೀವು ಕಪ್ಪು ಬಣ್ಣದ ಆಸನದ ಮೇಲೆ ಕುಳಿತು ಮಂತ್ರವನ್ನು ಪಠಿಸಬೇಕು. ಆಂಜನೇಯ ಸ್ವಾಮಿಯ ಅಥವಾ ಶನಿ ದೇವನ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಅದರ ಮುಂದೆ ದೀಪವನ್ನು ಹಚ್ಚಿಟ್ಟು ನಂತರ ಈ ಶನಿ ಮಂತ್ರಗಳನ್ನು ಪಠಿಸಬೇಕು. ಇದರಿಂದಾಗಿ ಶನಿಯ ಕೆಟ್ಟ ದೃಷ್ಟಿಯು ಕಡಿಮೆಯಾಗುತ್ತದೆ. ನಿಮ್ಮ ಜೀವನವು ಸ್ಥಿರತೆ ಮತ್ತು ಪ್ರಗತಿಯಿಂದ ಕೂಡಿರುವಂತೆ ಈ ಮಂತ್ರ ಮಾಡುವುದು.
ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನೀವು ನಿಮಗೆ ಹತ್ತಿರವಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಅಲ್ಲಿರುವ ಆಂಜನೇಯನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ. ಮಂಗಳವಾರದ ದಿನದಂದು ನಾವು ಆಂಜನೇಯ ಸ್ವಾಮಿಯನ್ನು ಪೂಜಿಸಿ ಈ ಎರಡು ವಸ್ತುಗಳನ್ನು ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳಾಗಿರಬಹುದು ಅಥವಾ ಶನಿ ದೋಷವಾಗಿರಬಹುದು ಶಾಂತವಾಗುವುದು ಎನ್ನುವ ನಂಬಿಕೆಯಿದೆ. ಯಾಕೆಂದರೆ ಸ್ವತಃ ಶನಿಯೇ ಹನುಮಂತನ ಭಕ್ತನಾಗಿದ್ದಾನೆ. ಹೀಗೆ ನೀವು ಹನುಮಂತನನ್ನು ಪೂಜಿಸುವುದರಿಂದ ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ.
ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಿ ನಂತರ ಸಾಸಿವೆ ಎಣ್ಣೆಯಲ್ಲಿ ಕಪ್ಪು ಎಳ್ಳನ್ನು ಬೆರೆಸಿ ದೀಪದಲ್ಲಿ ಹಾಕಿ ಆ ದೀಪವನ್ನು ಅರಳಿ ಮರದ ಕೆಳಗೆ ಹಚ್ಚಿಡಿ. ಬಳಿಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಶನಿದೇವನನ್ನು ಬೇಡಿಕೊಂಡು “ಓಂ ಶಂ ಶನೈಶ್ಚರಾಯ ನಮಃ” ಎಂಬ ಮಂತ್ರವನ್ನು ಪಠಿಸಿ. ಈ ಕೆಲಸವನ್ನು ನಾವು ಮಂಗಳವಾರದಂದು ಸಂಜೆ ಮಾಡುವುದರಿಂದ ಶನಿ ದೇವನಿಂದ ನಾವು ಎದುರಿಸುತ್ತಿರುವ ಅಶುಭ ಪರಿಣಾಮಗಳು ಕರಿಮೆಯಾಗುತ್ತದೆ. ಆರೋಗ್ಯದ ಸಮಸ್ಯೆಗಳಿಂದ, ಅಪಘಾತಗಳಿಂದ, ಕೋರ್ಟ್ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಮಗೆ ರಕ್ಷಣೆಯನ್ನು ನೀಡುತ್ತದೆ. ಇದು ಜೀವನದಲ್ಲಿನ ಅಡೆತಡೆಗಳನ್ನು ತೆಗೆದುಹಾಕಿ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುವುದು.
ಶನಿಗೆ ಸಂಬಂಧಿಸಿದ ಸ್ತೋತ್ರ ಹಾಗೂ ಮಂತ್ರಗಳಲ್ಲಿ ಶನಿ ಚಾಲೀಸಾಕ್ಕೆ ಅಗಾಧವಾದ ಶಕ್ತಿಯಿದೆ. ಈ ಕಾರಣಕ್ಕಾಗಿ ನೀವು ಮಂಗಳವಾರದ ದಿನದಂದು ಸಂಜೆ ಯಾವುದಾದರೂ ಶುದ್ಧ ಹಾಗೂ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಶನಿ ಚಾಲೀಸಾವನ್ನು ಅಥವಾ ಶನಿ ಸ್ತೋತ್ರವನ್ನು ಪಠಿಸಬೇಕು. ಈ ಶನಿ ಚಾಲೀಸಾ ಅಥವಾ ಶನಿ ಸ್ತೋತ್ರವನ್ನು ಪಠಿಸುವ ಮುನ್ನ ದೀಪವನ್ನು ಬೆಳಗಿ, ಶನಿದೇವನನ್ನು ಧ್ಯಾನಿಸಿ. ಈ ರೀತಿ ನೀವು ಶನಿ ಚಾಲೀಸಾವನ್ನು ಪಠಿಸುವುದರಿಂದ ಜೀವನದ ಸಂಕಷ್ಟಗಳೆಲ್ಲಾ ಪರಿಹಾರವಾಗುವುದು. ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ದೊರೆತು ಮಾನಸಿಕ ಶಾಂತಿಯನ್ನು ಪಡೆಯುವರು.
ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನೀವು ಕಪ್ಪು ಬಣ್ಣದ ಹಸು ಅಥವಾ ಕಪ್ಪು ಬಣ್ಣದ ನಾಯಿಗೆ ತಿನ್ನಲು ರೊಟ್ಟಿಯನ್ನು ನೀಡಬೇಕು. ಒಂದು ವೇಳೆ ನೀವು ಕಪ್ಪು ಬಣ್ಣದ ಹಸುವಿಗೆ ರೊಟ್ಟಿಯನ್ನು ನೀಡುತ್ತಿದ್ದರೆ, ರೊಟ್ಟಿಯೊಂದಿಗೆ ಬೆಲ್ಲವನ್ನಿಟ್ಟು ನೀಡಬೇಕು. ಅದೇ ಕಪ್ಪು ಬಣ್ಣದ ನಾಯಿಗೆ ರೊಟ್ಟಿಯನ್ನು ನೀಡುತ್ತಿದ್ದರೆ ಅದಕ್ಕೆ ಎಣ್ಣೆಯನ್ನು ಹಚ್ಚಿ ನೀಡಬೇಕು. ಯಾಕೆಂದರೆ, ಶನಿಯು ಕಪ್ಪು ಬಣ್ಣದ ಪ್ರಾಣಿಗಳನ್ನು ಇಷ್ಟಪಡುತ್ತಾನೆ. ಅವುಗಳನ್ನು ನಾವು ಪೋಷಣೆ ಮಾಡುವುದರಿಂದ ಶನಿಯು ನಮ್ಮನ್ನು ಎಲ್ಲಾ ರೀತಿಯ ದುಃಖ, ಕಷ್ಟಗಳಿಂದ ರಕ್ಷಿಸುತ್ತಾನೆ ಎಂಬ ನಂಬಿಕೆ.