ಧಾರವಾಡ : ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 8 ಲಕ್ಷದ ಮೌಲ್ಯದ 5 ಎತ್ತು, 31 ಹೋರಿಗಳನ್ನು ರಕ್ಷಿಸಿ, ಗೋಶಾಲೆಗೆ ರವಾನಿಸಿದ್ದಾರೆ.
ಕಲಘಟಗಿ ಪಟ್ಟಣದ ಮಹ್ಮದ್ ಆಸೀಫ್ ನಾಲಬಂಧ ಹಾಗೂ ಶಿಗ್ಗಾಂವಿ ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹಜರತ್ ಆಲಿ ತಹಸೀಲ್ದಾರ್ ಬಂಧಿತ ಆರೋಪಿಗಳು ಕಂಟೇನರ್ ವಾಹನದಲ್ಲಿ ಕಲಘಟಗಿಯಿಂದ ಯಲ್ಲಾಪುರ ಮಾರ್ಗವಾಗಿ ತೆರಳುವಾಗ ಪಟ್ಟಣದ ಪೊಲೀಸ್ ಠಾಣೆ ಚೆಕ್ಪೋಸ್ಟ್ ನಲ್ಲಿ ಬುಧವಾರ ರಾತ್ರಿ 3 ಘಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ವಾಹನದಲ್ಲಿ ಅಂದಾಜು ₹8 ಲಕ್ಷ ಮೌಲ್ಯದ 5 ಎತ್ತುಗಳು, 31 ಹೋರಿಗಳು ಹಾಗೂ ವಾಹನದ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಬಂಧಿತರು ಎಲ್ಲೋ ಕಳ್ಳತನ ಮಾಡಿ, ಮಾರಾಟ ಮಾಡುವ ಉದ್ದೇಶದಿಂದ ಒಂದೇ ವಾಹನದಲ್ಲಿ ಜಾನುವಾರುಗಳಿಗೆ ನೀರು, ಆಹಾರ ಇಲ್ಲದೇ ಹಿಂಸೆ ನೀಡುವ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಹಾಕಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಶ್ರೀಶೈಲ್ ಕೌಜಲಗಿ ನೇತೃತ್ವದಲ್ಲಿ ಪಿಎಸ್ ಐ ಕರವಿರಪ್ಪನವರ, ಗಿರೀಶ ಎಂ. ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.