ಕೋಲಾರ : ಕೋಲಾರದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಉಪಲೋಕಾಯುಕ್ತರು ಸಂಚಾರ ನಡೆಸಿದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹಾಗೂ ಮಾಕರಹಳ್ಳಿಯ ಸುತ್ತಮುತ್ತಲಿರುವ ಕ್ರಷರ್ ಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತರಾದ ವೀರಪ್ಪ ಅವರು ಗಣಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕ್ರಷರ್ ವಾಹನಗಳು ಓಡಾಡಲು ಕೆರೆಗಳನ್ನು ಹಾಳು ಮಾಡಲಾಗಿದ್ದು, ಕೆರೆಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಇದೆ. ಹೀಗಾಗಿ ಕೂಡಲೇ ಅಕ್ರಮ ರಸ್ತೆ ತೆರವು ಮಾಡಲು ತಹಶೀಲ್ದಾರ್ ರೂಪಾಗೆ ಸೂಚನೆ ನೀಡಿದ್ದಾರೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದ್ದು, ನಿಯಮಗಳು ಉಲ್ಲಂಘನೆಯಾದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದರು.
ಇತ್ತೀಚಿಗೆ ಕ್ರಷರ್ಗಳು ನಿಯಮಗಳು ಸರಿಯಾಗಿ ಪಾಲನೆ ಮಾಡದೆ, ಅಮಾಯಕ ಕಾರ್ಮಿಕರು ಸಾವನ್ನಪ್ಪಿದರು. ಈ ಹಿನ್ನೆಲೆ ಉಪಲೋಕಾಯುಕ್ತರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದರು.