ಚಾಮರಾಜನಗರ : ದೇಶದ ಪ್ರಸಿದ್ದ ಅರಣ್ಯವಾದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಗ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಿ ಸಿನಿಮಾ ಚಿತ್ರೀಕರಣ ನಡದಿತ್ತು, ಅರಣ್ಯ ನಿಯಮವನ್ನು ಉಲ್ಲಂಘಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದ್ದು, ಪರಿಸರ ಪ್ರಿಯರಿಂದ ಭಾರೀ ಟೀಕೆಗೆ ಗ್ರಾಸವಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಕಾನೂನು ಹಾಗೂ ನಿಯಮವನ್ನು ಸ್ಪಷ್ವವಾಗಿ ಅರಣ್ಯ ಇಲಾಖೆಯೇ ಉಲ್ಲಂಘನೆ ಮಾಡಿದೆ ಎಂದು ಪರಿಸರ ಪ್ರಿಯರು ಆರೋಪಿಸಿದ್ದಾರೆ.
ಕರ್ನಾಟಕದ ಊಟಿ ಎಂದೇ ಪ್ರಸಿದ್ದ ಪಡೆದಿರುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದ ಒಳಗೆ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಮಲೆಯಾಳಿ ಸಿನಿಮಾದ ಶೂಟಿಂಗ್ ನಡೆಯುವ ಮೂಲಕ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ಹಿಮವದ್ ಗೋಪಾಲಸ್ವಾಮಿಬೆಟ್ಟ ಬೇಸಿಗೆಯಲ್ಲೂ ಕೂಡ ಹಿಮದಿಂದ ಆವರಿಸಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತೆ. ಇಂತಹ ಪ್ರದೇಶದಲ್ಲಿ ಮಲೆಯಾಳಿ ಸಿನಿಮಾ ತಂಡವು ಮಂಗಳವಾರ ಶೂಟಿಂಗ್ ಮಾಡಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಬೇಕಾದ್ರೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನೀತಿ ನಿಯಮಗಳನ್ನು ಪಾಲಿಸಬೇಕಾಗುವುದು ಖಡ್ಡಾಯ. ಆದರೆ ,ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಹಜ ಜೀವನಕ್ಕೆ ಧಕ್ಕೆಯಾಗಬಾರದೆಂಬ ಅರಣ್ಯ ಇಲಾಖೆಯೇ ನಿಯಮಕ್ಕೆ ಸ್ವತ: ಅರಣ್ಯ ಇಲಾಖೆಯ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ನಿಯಮದಂತೆ
ಯಾವುದೇ ಖಾಸಗೀ ವ್ಯಕ್ತಿಗಳು ಖಾಸಗಿ ವಾಹನದಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವಂತಿಲ್ಲ, ಖಡ್ಡಾಯವಾಗಿ ಪ್ಲಾಸ್ಟಿಕ್ ಬಳಸುವಂತಿಲ್ಲ, ಶಬ್ಧ ಮಾಲಿನ್ಯ ಮಾಡುವಂತಿಲ್ಲ. ಅಲ್ಲದೆ ಬೆಟ್ಟದ ತಳಭಾಗದಲ್ಲಿರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ನಿರ್ಮಿಸಿರುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿ ಅರಣ್ಯ ಇಲಾಖೆಯ ವಾಹನ ಅಥವಾ ಕೆ.ಎಸ.ಆರ.ಟಿ.ಸಿ ಬಸ್ಸಿನಲ್ಲೇ ಬೆಟ್ಟಕ್ಕೆ ಪ್ರಯಾಣಿಸಬೇಕು.
ಇವೆಲ್ಲ ನಿಯಮ ಇರೋದು ವನ್ಯಜೀವಿಗ ಸಹಜ ಜೀವನಕ್ಕೆ ಧಕ್ಕೆ ಆಗಬಾರದು ಅಂತ. ಆದರೆ ಇವಿಷ್ಟೂ ನಿಯಮಗಳನ್ನು ಮಲೆಯಾಳಿ ಸಿನಿಮಾ ಚಿತ್ರೀಕರಣಕ್ಕಾಗಿ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳೆ ಗಾಳಿಗೆ ತೂರಿದ್ದಾರೆ ಎಂದು ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಸಿ.ಎಫ್.ಪ್ರಭಾಕರ್ ರವರಿಗೆ ಕರೆ ಮಾಡಿದಾಗ ಫೋನ್ ಸಂಪರ್ಕ ಸಿಗಲಿಲ್ಲ, ಎಸಿಎಫ ನವೀನ್ ಕುಮಾರ್ ಆರ್ಎಫ.ಓ. ಮಲ್ಲೇಶ್ ರವರು ವಾಹಿನಿಯೊಂದಿಗೆ ಮಾತನಾಡಿ, ಸರ್ಕಾರದಿಂದ ಆದೇಶ ಬಂದಿತ್ತು ಹಾಗಾಗಿ ಸಿನಿಮಾ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಒಂದು ದಿನದ ಮಲೆಯಾಳಿ ಸಿನಿಮಾದ ಶೂಟಿಂಗ್ ನಿರ್ಮಾಣಕ್ಕಸಗಿ ಅಷ್ಟೂ ನಿಯಮಗಳನ್ನು ಗಾಳಿಗೆ ತೂರಿದ್ದು ಸರಿಯಲ್ಲ ಸಿನಿಮಾದವರಿಗೆ ಒಂದು ಕಾನೂನು ಸಾರ್ವಜನಿಕರಿಗೆ ಒಂದು ಕಾನೂನು ಇದಿಯಾ ಎಂದು ಪರಿಸರ ಪ್ರಿಯರು ಇದೀಗ ಆಕ್ರೋಶ ವ್ಯಕ್ತ ಪಡಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.