ಹುಬ್ಬಳ್ಳಿ : ನಮ್ಮ ಸರಕಾರ ಹಾಗೂ ನಮ್ಮ ನಾಯಕರು ಸೈನಿಕರಿಗೆ ಮನೋಬಲ ಹೆಚ್ಚಿಸುವ ಕೆಲಸ ಮಾಡಿದ್ದೇವೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಭಾರತ ಪಾಕಿಸ್ತಾನ್ ಸಮರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದ್ದುಸೈನಿಕರಿಗೆ ಮನೋಬಲ ಹೆಚ್ಚಿಸುವ ಕೆಲಸ ಮಾಡಿದ್ದೇವೆ ಇದರ ಜೊತೆಗೆ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಹೇಳಲಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ನ ಟ್ವಿಟಿಗೆ ಪ್ರತಿಕ್ರಿಯೆ ನೀಡಿದ ಅವರುನಮ್ಮ ಸೈನಿಕರು ತಕ್ಕ ಉತ್ತರ ಕೊಡಬೇಕು, ಕೊಡ್ತಾ ಇದ್ದಾರೆ
ಇದು ಮಹಾತ್ಮಾ ಗಾಂಧೀ ಅವರ ನಾಡು ಆಗಿದ್ದು ಮಹಾತ್ಮ ಗಾಂಧೀಜಿ ಒಂದು ಕಾಪಾಳಕ್ಕೆ ಹೊಡೆದ್ರೆ ಇನ್ನೊಂದು ಕಾಪಾಳ ನೀಡಲು ಹೇಳಿದ್ರು ಆದರೆ ಅದನ್ನ ಮೀರಿದ್ರೆ ನಾವು ಕಾಪಾಳ ಮೋಕ್ಷ ಮಾಡೋದು ನಮ್ಮ ಧರ್ಮ ಎಂದರು.