ಬೆಂಗಳೂರು: ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಸಂಬಂಧ ರಾಜೇಂದ್ರ ಕ್ಯಾರಸಂದ್ರದಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರೆ ತನಿಖೆ ಮಾಡಿ ಆ ನಾಯಕ ಯಾರು ಅಂತ ಹೇಳಬೇಕು.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ..!
ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಕಾದು ನೋಡೋಣ ಎಂದಿದ್ದಾರೆ. ಮಹಾನಾಯಕರು ದೇಶದಲ್ಲಿ ತುಂಬಾ ಜನ ಇದ್ದಾರೆ. ಇಂತಹ ಘಟನೆಗಳು ಸಹ ಅನೇಕ ಇವೆ. ಬೇರೆ ರಾಜ್ಯಗಳಲ್ಲಿ ಇಂತಹ ಘಟನೆ ಆಗಿವೆ. ಇವರೆ, ಅವರೆ ಹೀಗೆ ಮಾಡಿದ್ದಾರೆ ಎಂದು ಹೇಳೋಕೆ ಅಗಲ್ಲ. ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದಿದ್ದಾರೆ.