ಪಹಲ್ಗಾಂ ಉಗ್ರ ದಾಳಿ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ. ಭಾರತದ ತಂಟೆಗೆ ಬಂದ್ರೆ ಏನು ಮಾಡುತ್ತೇವೆ ಎಂದು ಉತ್ತರ ಕೊಟ್ಟಿದೆ. ಭಾರತದ ಶಕ್ತಿಯನ್ನು ತೋರಿಸಿದೆ. ಈ ಕಾರ್ಯಾಚರಣೆ ಬಗ್ಗೆ ಮಾಲಿವುಡ್ ನಟ ಮೋಹನ್ ಲಾಲ್ ಹೊಗಳಿದ್ದಾರೆ.
ಎಕ್ಸ್ನಲ್ಲಿ ನಾವು ಸಿಂಧೂರವನ್ನು ಕೇವಲ ಸಂಪ್ರದಾಯಿಕವಾಗಿ ಇಡುತ್ತಿಲ್ಲ. ಬದಲಾಗಿ ಸಂಕೇತವಾಗಿ ಇಡುತ್ತೇವೆ. ನಮಗೆ ಸವಾಲು ಹಾಕಿದ್ರೆ ನಾವು ಎಂದಿಗಿಂತಲೂ ಹೆಚ್ಚು ನಿರ್ಭೀತರಾಗಿ ಮತ್ತು ಬಲಶಾಲಿಯಾಗಿ ನಿಲ್ಲುತ್ತೇವೆ.
We wore Sindoor not just as a tradition, but as a symbol of our unwavering resolve.
Challenge us and we will rise, fearless and stronger than ever.
Saluting every brave heart of the Indian Army, Navy, Air Force, and BSF.
Your courage fuels our pride.Jai Hind! 🇮🇳…
— Mohanlal (@Mohanlal) May 7, 2025
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಬಿಎಸ್ಎಫ್ನ ಪ್ರತಿಯೊಬ್ಬ ಧೈರ್ಯಶಾಲಿ ಹೃದಯಗಳಿಗೆ ನಮಿಸುತ್ತೇನೆ. ನಿಮ್ಮ ಧೈರ್ಯ ನಮ್ಮ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ಜೈ ಹಿಂದ್.. ಆಪರೇಷನ್ ಸಿಂಧೂರ ಎಂದು ಭಾರತೀಯ ಸೇನೆಗೆ ಮೋಹನ್ ಲಾಲ್ ಮೆಚ್ಚುಗೆ ಸೂಚಿಸಿದ್ದಾರೆ.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.