ಹುಬ್ಬಳ್ಳಿ : ನಾಲ್ಕು ಪರಿಷತ್ ಸದಸ್ಯ ಸ್ಥಾನ ಖಾಲಿಯಿದೆ ಹೀಗಾಗಿ ಹೈಕಮಾಂಡ್ ಬಳಿ ಆ ಬಗ್ಗೆ ಚರ್ಚೆ ಮಾಡಲು ತೆರಳುತ್ತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ಹುಬ್ಬಳ್ಳಿ ನಗರದಲ್ಲಿ ಇಂದು ಡಿಸಿಎಂ ಡಿಕೆಶಿವಕುಮಾರ್ ಮಾತನಾಡಿ ಸಂಪುಟ ವಿಸ್ತರಣೆ ವದಂತಿ ತಳ್ಳಿಹಾಕಿದರು.
ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾನೆಯಿದೆ. ಜೊತೆಗೆ 4 ಎಂಎಲ್ ಸಿ ಸ್ಥಾನ ಖಾಲಿ ಇದೆ. ಸಂಸತ್ತಿನ ಅಧಿವೇಶನದ ಮತ್ತು ಸಿಎಂ ಕಾಲಿನ ಸಮಸ್ಯೆಯಿಂದ ಉದ್ಘಾಟನೆ ತಡವಾಗಿದೆ. ಬಹಳಷ್ಟು ದಿನ ಖಾಲಿಯಿಟ್ಟುಕೊಂಡು ಕೂರಲು ಆಗಲ್ಲ. ಯಾವುದೇ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಇಲ್ಲ ಎಂದರು. ಅದು ಸಿಎಂ ವಿವೇಚನೆಗೆ ಬಿಟ್ಟಿದ್ದು ಅದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ
ರಾಹುಲ್ ಗಾಂಧಿ-ಸಿದ್ದು ಭೇಟಿ: ರಾಜ್ಯ ರಾಜಕೀಯಕ್ಕೆ ಬಂತು ರೆಕ್ಕೆಪುಕ್ಕ !
ಇನ್ನೂ ಯತ್ನಾಳ ಕಾಂಗ್ರೆಸ್ ಗೆ ಬರೋದು ಎಲ್ಲಾ ಸುಳ್ಳು ನಮಗ್ಯಾಕೆ ಅವರ ಪಾರ್ಟಿ ಸುದ್ದಿ. ಅವರುಂಟು ಅವರ ಪಾರ್ಟಿ ಉಂಟು ಅವರಿಗೆ ಒಳ್ಳೆಯದಾಗಲಿ ಎಂದರು. ಇದೇ ವೇಳೆ ವಕ್ಪ್ ಬೋರ್ಡ್ ಮಸೂದೆ ಕುರಿತ ಪ್ರಶ್ನೆಗೆ ಉತ್ತರಿಸದೇ ಮೌನವಾಗಿ ನಡೆದರು.