ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ ಸಿಬಿ ಅಬ್ಬರ ಜೋರಾಗಿದೆ. ನಿನ್ನೆ ತವರಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಜತ್ ಪಾಟೀದಾರ್ ಪಡೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದ್ರೆ ಜಿಟಿ ಅಬ್ಬರಕ್ಕೆ ಆರ್ ಸಿಬಿ ತತ್ತರಿಸಿದ್ದು, ತವರಿನಲ್ಲಿ ಆರ್ ಸಿಬಿ ಮುಖಭಂಗ ಅನುಭವಿಸುವಂತಾಯ್ತು. ಪಂದ್ಯ ಆರಂಭಕ್ಕೂ ಮುನ್ನ ಕರ್ನಾಟಕದ ಖ್ಯಾತ ಗಾಯಕ ವಿಜಯ್ ಸಂಗೀತ ಕಾರ್ಯಕ್ರಮ ನಡೆಸಿಯಿತು.
ಈ ಬಾರಿ ಐಪಿಎಲ್ಗೆ ಆತಿಥ್ಯ ವಹಿಸುವ ಎಲ್ಲಾ 13 ನಗರಗಳಲ್ಲೂ ಬಿಸಿಸಿಐ ಉದ್ಘಾಟನಾ ಸಮಾರಂಭ ನಡೆಸಲು ನಿರ್ಧರಿಸಿತ್ತು. ಅದರಂತೆ ಬೆಂಗಳೂರಲ್ಲೂ ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ನಡೆಯಿತು. ವಿಜಯ್ ಪ್ರಕಾಶ್ ಸಂಗೀತ ಸುಧೆ ಹರಿಸಿದ್ದು, ನೆರೆದಿದ್ದ ಆರ್ ಸಿಬಿ ಅಭಿಮಾನಿಗಳು ಕನ್ನಡ ಹಾಡುಗಳನ್ನು ಕೇಳಿ ನಿಂತಲ್ಲೇ ಹೆಜ್ಜೆ ಹಾಕಿದರು.
ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿಗಾಗಿ ಹಾಡಿ ಕುಣಿದ ಬಂದ ವಿಜಯ್ ಪ್ರಕಾಶ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಪಾದದ ಮೂಳೆ ಉಳುಕಿದ್ದು, ಅದೃಷ್ಟವಶಾತ್ ಪ್ರದರ್ಶನದ ನಂತರ ಈ ರೀತಿ ಆಗಿದೆ ಎಂದು ಪಾದಕ್ಕೆ ಬ್ಯಾಂಡೇಜ್ ಸುತ್ತಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಇನ್ನು, ಅಭಿಮಾನಿಗಳು ಆದಷ್ಟು ಬೇಗ ಹುಷಾರಾಗಿ ಎಂದು ಹಾರೈಸುತ್ತಿದ್ದಾರೆ.