Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    By Author AINJune 5, 2025
    xr:d:DAFk8NHagas:2,j:2818519925696316377,t:23060508
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷ ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    ಇತಿಹಾಸ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1972ರಲ್ಲಿ ಪರಿಸರ ರಕ್ಷಣೆಯ ಕ್ರಮಗಳ ಪ್ರೊತ್ಸಾಹಕ ಕ್ರಮ ಮತ್ತು ಜಾಗೃತಿಯನ್ನು ಮೂಡಿಸಿತು. ಸ್ವೀಡನ್​ನ ಸ್ಟಾಕ್​ಹೋಮ್​ನಲ್ಲಿನ ವಿಶ್ವಸಂಸ್ಥೆಯ ಕಾನ್ಫರೆನ್ಸ್​​ನಿಂದ ಇದು ಆರಂಭವಾಯಿತು. ಈ ಸಭೆಯಲ್ಲಿ ಪರಿಸರ ರಕ್ಷಣೆ ಅಗತ್ಯತೆ ಕುರಿತು ಮಾತುಕತೆ ನಡೆಸಲಾಯಿತು.

    2ನೇ ವಿಶ್ವ ಯುದ್ಧದಿಂದಾದ ಪರಿಣಾಮ ಮತ್ತು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಇದು ನಡೆಯಿತು. ಜಪಾನ್​ನ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಪರಮಾಣು ಬಾಂಬ್‌ ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಕ್ಯೂಬಾ, ವಿಯೆಟ್ನಾಂ ಮತ್ತು ಇತರರು ಸೇರಿದಂತೆ ಇತರೆ ಕಡೆ ಯುದ್ಧಗಳು ನಡೆಯುತ್ತಿದ್ದವು. 1973ರಲ್ಲಿ ವಿಶ್ವ ಪರಿಸರ ದಿನವಾಗಿ ಘೋಷಿಸಲಾಯಿತು.

    ಧ್ಯೇಯ 2025: ಈ ವರ್ಷ ಸೌದಿ ಅರೇಬಿಯಾ ವಾರ್ಷಿಕ ಸಭೆಯನ್ನು ಆಯೋಜಿಸುತ್ತಿದ್ದು, ಭೂಮಿ ಪುನರ್​ಸ್ಥಾಪನೆ, ಬರಡುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ ಕುರಿತು ಗಮನ ಹರಿಸಲಾಗಿದೆ. ಈ ವರ್ಷದ ಧ್ಯೇಯವಾಕ್ಯ ನಮ್ಮ ಭೂಮಿ ನಮ್ಮ ಭವಿಷ್ಯ, ಪೀಳಿಗೆಯ ಪುನರ್​ಸ್ಥಾಪಕರು ನಾವು ಎಂಬುದಾಗಿದೆ.

    ಜಾಗತಿಕ ಸಭೆ ಆಯೋಜಿಸುತ್ತಿರುವ ಸೌದಿ ಅರೇಬಿಯಾ, 2030 ಗುರಿಗಳಿಗೆ ಅನುಗುಣವಾಗಿ ಪರಿಸರವನ್ನು ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿಲು ಬದ್ಧವಾಗಿರುವುದಾಗಿ ತಿಳಿಸಿದೆ. ಈ ಕಾರ್ಯಕ್ರಮವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಹತ್ತಾರು ಮಿಲಿಯನ್​ ಜನರು ಭಾಗಿಯಾಗಲಿದ್ದಾರೆ.

    ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸಲು ಇದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ 2019ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2021-2030ರ ಪರಿಸರ ವ್ಯವಸ್ಥೆಯ ಪುನರ್​ಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿತು. ಈ ವಿಶ್ವ ಪರಿಸರ ದಿನದ ಗುರಿ, ಈ ಬದ್ಧತೆಯೆಡೆಗಿನ ಪ್ರಗತಿಯನ್ನು ಬೆಂಬಲಿಸುವುದಾಗಿದೆ.

    ಯುಎನ್​ಇಪಿ ಪ್ರಕಾರ, ಜಾಗತಿಕವಾಗಿ, ದೇಶಗಳು ಒಂದು ಬಿಲಿಯನ್​ ಹೆಕ್ಟೇರ್​ ಭೂಮಿಗಳನ್ನು ಪುನರ್​ಸ್ಥಾಪನೆಗೆ ನಿರ್ಣಯಿಸಿದೆ. ಅದರಲ್ಲೂ ದೊಡ್ಡ ಪ್ರದೇಶವಾಗಿರುವ ಚೀನಾ ಶೇ 30ರಷ್ಟು ಭೂಮಿ ಮತ್ತು ಸಮುದ್ರವನ್ನು ರಕ್ಷಿಸುವ ಗುರಿ ಹೊಂದಿದೆ.

    ಭೂಮಿ ಬರಡಗಾದಂತೆ ತಡೆಯಲಿರುವ ಮಾರ್ಗಗಳು–

    ಸಾವಯವ ಕೃಷಿಗೆ ಉತ್ತೇಜನ: ಸಾವಯವ ಕೃಷಿಗೆ ಉತ್ತೇಜಿಸುವುದರಿಂದ ಭೂಮಿ ಫಲವತ್ತತೆಯ ವಿನ್ಯಾಸ ರಕ್ಷಣೆ ಮಾಡಬಹುದಾಗಿದೆ. ಜೊತೆಗೆ ಆಹಾರಗಳು ಬೆಳೆಗಳು ಶೇ 100ರಷ್ಟು ಸುರಕ್ಷಿತ ಮತ್ತು ಆರೋಗ್ಯಯುತವಾಗಿರುತ್ತವೆ.

    ಮರ ನೆಡುವುದು: ನಗರೀಕರಣ ಮತ್ತು ದೇಶಗಳು ವೇಗದ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಮರಗಳ ನಾಶವಾಗಿವೆ. ಗಿಡ-ಮರ ನಾಶ ಮಾಡಿ ಕೈಗಾರಿಕೆ, ಮನೆ ಅಥವಾ ನಗರಗಳ ನಿರ್ಮಾಣ ಮಾಡಲಾಗಿದೆ. ಇದು ನೀರಿನ ಸಾಮರ್ಥ್ಯ ನಷ್ಟದ ಜೊತೆಗೆ ಪ್ರಮುಖ ಪರಿಸರ ಸಮಸ್ಯೆಯಾಗಿದೆ. ಈ ಹಿನ್ನೆಲೆ ಭೂಮಿಯ ಗುಣಮಟ್ಟ ರಕ್ಷಣೆ ಮತ್ತು ಆಮ್ಲಜನಕದ ಉದ್ದೇಶದಿಂದ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ.

    ಶುದ್ಧ ಜಲದ ಪರಿಸರ ವ್ಯವಸ್ಥೆ ಮರು ನಿರ್ಮಾಣ: ಶುದ್ಧ ಜಲ ಪರಿಸರ ವ್ಯವಸ್ಥೆಯ ಜಲಚಕ್ರ ಭೂಮಿ ಫಲವತ್ತತೆ ಕಾಪಾಡುತ್ತದೆ. ಇದು ಬಿಲಿಯಾಂತರ ಜನರಿಗೆ ಆಹಾರ ಮತ್ತು ನೀರು ಒದಗಿಸುವ ಮೂಲಕ ಬರ, ಪ್ರವಾಹದಿಂದ ರಕ್ಷಿಸುತ್ತದೆ. ಅನೇಕ ಸಸ್ಯಗಳು ಮತ್ತು ಪ್ರಾಣಿಗಳಿಗೆ ಆವಾಸಸ್ಥಾನ ಕಲ್ಪಿಸುತ್ತದೆ. ಹವಾಮಾನ ಬದಲಾವಣೆ, ಮಾಲಿನ್ಯ, ಮೀನುಗಾರಿಕೆ ಅತಿ ಎನ್ನುವ ಮಟ್ಟದಲ್ಲಿ ಸಾಗಿದೆ. ನೀರಿನ ಗುಣಮಟ್ಟ ಸುಧಾರಣೆ ಮೂಲಕ ಜನರು ಇದನ್ನು ನಿಲ್ಲಿಸಬಹುದಾಗಿದೆ. ಮಾಲಿನ್ಯದ ಮೂಲ ಪತ್ತೆ ಮತ್ತು ಶುದ್ಧ ಜಲ ಪರಿಸರ ವ್ಯವಸ್ಥೆಯನ್ನು ನಿರ್ವಹಣೆ ಮಾಡಬೇಕಿದೆ.

    ಕರಾವಳಿ ಮತ್ತು ಸಾಗರ ಪ್ರದೇಶಗಳ ನವೀಕರಣ: ಸಾಗರ ಮತ್ತು ಸಮುದ್ರಗಳು ಮಾನವರಿಗೆ ಆಮ್ಲಜನಕ, ಆಹಾರ ಮತ್ತು ನೀರನ್ನು ಒದಗಿಸುತ್ತವೆ. ಆದರೆ ಹವಾಮಾನ ಬದಲಾವಣೆಯನ್ನು ತಗ್ಗಿಸುತ್ತದೆ ಮತ್ತು ಸಮುದಾಯಗಳು ತೀವ್ರ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ವಿಶ್ವಸಂಸ್ಥೆಯ ಪ್ರಕಾರ, 3 ಬಿಲಿಯನ್​ಗೂ ಹೆಚ್ಚು ಜನರು, ಪ್ರಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಗರ ಮತ್ತು ಕರಾವಳಿ ಜೀವವೈವಿಧ್ಯತೆಯನ್ನು ತಮ್ಮ ಜೀವನೋಪಾಯವಾಗಿ ಕಂಡುಕೊಂಡಿದ್ದಾರೆ. ಗ್ರೋವ್‌ಗಳು, ಉಪ್ಪು ಜವುಗುಗಳು, ಕೆಲ್ಪ್ ಕಾಡುಗಳು ಮತ್ತು ಹವಳದ ಬಂಡೆಗಳನ್ನು ಪುನಃಸ್ಥಾಪಿಸುವ ಮೂಲಕ ನೀಲಿ ಪರಿಸರ ವ್ಯವಸ್ಥೆ ಕಾಪಾಡಬೇಕಿದೆ.

    ಹಣಕಾಸು ಪುನಃಸ್ಥಾಪನೆ: ಭೂಮಿ ರಕ್ಷಣೆಗೆ ಸುಸ್ಥಿರ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕ್ ಖಾತೆ ಮರುಸ್ಥಾಪನೆಗೆ ದೇಣಿಗೆ ನೀಡಿ ಅಥವಾ ಕ್ರೌಡ್-ಫಂಡ್ ಸಹಾಯ ಮಾಡಬೇಕಿದೆ.

     

    Demo
    Share. Facebook Twitter LinkedIn Email WhatsApp

    Related Posts

    RCB Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: RCB ವಿರುದ್ಧ ಪ್ರಕರಣ ದಾಖಲು!

    June 6, 2025

    ಪಹಲ್ಗಾಮ್ ದಾಳಿ ಬೆನ್ನಲ್ಲೇ ಮೊದಲ ಬಾರಿಗೆ ಕಾಶ್ಮೀರಕ್ಕೆ PM ಮೋದಿ ಭೇಟಿ!

    June 6, 2025

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಸೈಲೆಂಟಾಗಿ ಎಸ್ಕೇಪ್ ಆಗುತ್ತಿದ್ದ RCB ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಅರೆಸ್ಟ್!

    June 6, 2025

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂನ್ 10ರ ಬಳಿಕ ಮಳೆ ಹೆಚ್ಚಳ!

    June 6, 2025

    ಆಘಾತಕಾರಿ ಘಟನೆ: ಮೆಟ್ರೋ ನಿಲ್ದಾಣದ ಕೆಳಗೆ 3 ವರ್ಷದ ಬಾಲಕಿ ಮೇಲೆ ರೇಪ್!

    June 6, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ನಾಲ್ವರು ಅರೆಸ್ಟ್.. ಉಳಿದವರು ಎಸ್ಕೇಪ್; ಪೊಲೀಸರಿಂದ ಶೋಧ!

    June 6, 2025

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ರಾತ್ರೋ-ರಾತ್ರಿ ಓರ್ವ ಅರೆಸ್ಟ್.. ತನಿಖೆ ಚುರುಕು!

    June 6, 2025

    ಕಾಲ್ತುಳಿತ ಕೇಸ್: ಕಮಿಷನರ್ ದಯಾನಂದ್ ಸಸ್ಪೆಂಡ್.. ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ; ಯಾರ್ಯಾರು, ಏನಂದ್ರು?

    June 6, 2025

    I Stand with B Dayanand: ಸೋಷಿಯಲ್ ಮೀಡಿಯಾದಲ್ಲಿ ದಯಾನಂದ್ ಗೆ ಭಾರೀ ಬೆಂಬಲ.. ಹಲವು ಪೋಸ್ಟ್ ಗಳು ವೈರಲ್!

    June 6, 2025

    ದಯಾನಂದ್ ಸಸ್ಪೆಂಡ್: ಪೊಲೀಸ್ ಇತಿಹಾಸದಲ್ಲೇ ಇದು ಕರಾಳ ದಿನ – ಭಾಸ್ಕರ್ ರಾವ್ ಆಕ್ರೋಶ!

    June 6, 2025

    ಬೆಂಗಳೂರಿಗೆ ಹೊಸ ಕಮಿಷನರ್: ದಯಾನಂದ್ ಜಾಗಕ್ಕೆ ಸೀಮಂತ್ ಕುಮಾರ್ ನೇಮಿಸಿ ಸರ್ಕಾರ ಆದೇಶ!

    June 6, 2025

    ಬೆಂಗಳೂರಿನ ಮುಂದಿನ ಕಮಿಷನರ್ ಯಾರಾಗ್ತಾರೆ!? ಈ ಇಬ್ಬರಲ್ಲಿ ಒಬ್ಬರು ಫಿಕ್ಸ್!?

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.