ಗದಗ : ಅಕ್ರಮ ಗಣಿ ಪತ್ರ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಪ್ರತಿಕ್ರಿಯೆಗೆ ಗದಗನಲ್ಲಿಂದು ಸಚಿವ ಎಚ್.ಕೆ. ಪಾಟೀಲ್ ಕಿವಿಮಾತು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಕ್ರಮ ಗಣಿ ವರದಿ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಪೂಜೆ ಮಾಡುತ್ತಾ ಕುಳಿತಿದ್ರಾ ಎಂದು ಪ್ರಶ್ನೆ ಹಾಕುತ್ತಿರುವ ಕುಮಾರಸ್ವಾಮಿಯವರು, ತಮ್ಮ ಆಡಳಿತಾವಧಿಯಲ್ಲಿ ಅವರ ಕೈಯಲ್ಲಿದ್ದ ಅದೇ ವರದಿಗೆ ಏನು ಮಾಡಿದ್ರು? ಎಂದು ಪ್ರಹಾರ ಮಾಡುವ ಮೂಲಕ ಟೀಕೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ!
ನೀವು ವರದಿಗೆ ಅಭಿಷೇಕ ಮಾಡ್ತಾ ಕುಳಿತಿದ್ರಾ? ಅಂತ ಎಚ್ಕೆಪಿ, ಕುಮಾರಸ್ವಾಮಿ ಅವ್ರಿಗೆ ಪ್ರಶ್ನೆ ಮಾಡಿದ್ದಾರೆ. ಅಕ್ರಮ ಗಣಿ ವರದಿ ನನ್ನ ಪತ್ರದ ಮುಖ್ಯ ವಿಷಯವಲ್ಲ. ನಾನು ಬರೆದ ಪತ್ರದ ಉದ್ದಕ್ಕೂ ಒಂದು ವಿಚಾರವನ್ನು ಮಾತ್ರ ಜೋರಾಗಿ ಬರೆದಿದ್ದೇನೆ – ರಾಜ್ಯದ ಸಂಪತ್ತು ಮರಳಿ ಕನ್ನಡಿಗರಿಗೆ ದೊರಕಬೇಕು. ಅಕ್ರಮ ಗಣಿ ಮೂಲಕ ನಷ್ಟವಾದ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ರಾಜ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ್ರು. ಇನ್ನು ಎಚ್ ಡಿ ಕುಮಾರಸ್ವಾಮಿಗೆ ನೇರ ಕರೆ ಮಾಡುತ್ತೇನೆ. ಮಾಜಿ ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ಈ ಹೋರಾಟದಲ್ಲಿ ಮುಂದಾಳತ್ವ ವಹಿಸಲಿ.
ಅವರು ಬಹುದೊಡ್ಡ ಸ್ಥಾನದಲ್ಲಿದ್ದುಕೊಂಡಿದ್ದಾರೆ. ಪೌರಾಣಿಕ ಪಾತ್ರಗಳ ಹೆಸರುಗಳನ್ನ ತೆಗೆದುಕೊಂಡು ಮಾತನಾಡುವ ಬದಲು, ಪ್ರಜಾಪ್ರಭುತ್ವದ ಸ್ಥಿರತೆಗೆ ಧಕ್ಕೆಯಾಗುವ ಅಕ್ರಮ ಗಳಿಗೆ ತಡೆಯಲು ಕೈಜೋಡಿಸಲಿ. ಇದು ರಾಜಕೀಯದ ವಿಷಯವಲ್ಲ. ಇದು ಸಾರ್ವಜನಿಕ ಹಿತದ ಪ್ರಶ್ನೆ, ಎಂದು ಅವರು ಹೇಳಿದ್ರು. ನನ್ನ ಪತ್ರ ಕಸದ ಬುಟ್ಟಿಗೋ? ಕ್ರಮದ ತೊಟ್ಟಿಗೋ? ಹೆಚ್.ಕೆ. ಪಾಟೀಲ್, ತಮ್ಮ ಪತ್ರದ ಕುರಿತು ಮಾತನಾಡುತ್ತ, ನನ್ನ ಪತ್ರ ಕಸದ ಬುಟ್ಟಿಗೆ ಹೋಗುತ್ತದೆಯೋ ಅಥವಾ ಕ್ರಮ ಕೈಗೊಳ್ಳುವ ದಿಕ್ಕಿಗೆ ಹೋಗುತ್ತದೆಯೋ – ಕಾಲವೇ ಉತ್ತರಿಸಲಿ. ನಾನು ಯಾರಿಗೆ ಪತ್ರ ಬರೆದಿದ್ದೇನೆ, ಅವರು ಅದನ್ನು ನಿರ್ಧರಿಸುತ್ತಾರೆ ಎಂದು ಉತ್ತರ ನೀಡಿದ್ರು.