ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುವ ವೇಳೆ ಗುಡುಗು ಸಹಿತ ಶುರುವಾಗಿತ್ತು. ಮಳೆಯ ನಡುವೆ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬೇಲೂರು ತಾಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಗದ್ದೆ ನಾಟಿ ವೇಳೆ ಸಿಡಿಲು ಬಡಿದು 17 ಮಂದಿ ಗಾಯಗೊಂಡಿದ್ದು, ಸಕಲೇಶಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.
ಪಿಎಂ ಕಿಸಾನ್ನ 18ನೇ ಕಂತಿನ ಹಣ ಬರೋದು ಯಾವಾಗ: ಮೊಬೈಲ್ ಸಂಖ್ಯೆ ಈ ರೀತಿ ನವೀಕರಿಸಿ:
ರೇಣುಕಾ, ಸವಿತಾ, ಸುಮಿತ್ರ, ರೇಣುಕಮ್ಮ, ನೇತ್ರಾ, ನಿರ್ಮಲ, ವೀಣಾ, ಅನಿತಾ, ಮಂಜುಳಾ, ಪುಷ್ಪ, ಭಾಗ್ಯ, ಶಾರದಮ್ಮ, ಜಯಂತಿ, ಗಾಯಿತ್ರಮ್ಮ, ಮಂಜುಳಮ್ಮ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.