ಬೆಂಗಳೂರು: 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಕೇಂದ್ರ ಸರ್ಕಾರ ಜಾತಿಗಣತಿ ಪ್ರಾರಂಭ ಮಾಡುತ್ತಿದೆ.
ಹೀಗಿರುವಾಗ ನೀವು ಯಾಕೆ ಜಾತಿಗಣತಿ ಬಿಡುಗಡೆ ಮಾಡಿದ್ದೀರಿ? ಈ ವರದಿ 10 ವರ್ಷಗಳ ಹಿಂದಿನ ವರದಿನಾ? ಹೊಸದಾಗಿ ಮಾಡಿರೋದಾ? 10 ವರ್ಷಗಳಲ್ಲಿ ಯಾರು ಹುಟ್ಟಿಲ್ಲವಾ, ಸತ್ತಿಲ್ಲವಾ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು.
ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!
ಈ ಕಾಂಗ್ರೆಸ್ ಸರ್ಕಾರ ಜಾತಿ ಹಿಂದೆ ಬಿದ್ದಿದೆ. ರಾಹುಲ್ ಗಾಂಧಿ ತೃಪ್ತಿ ಮಾಡಲು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗ, ಲಿಂಗಾಯತ ಮತ ಒಡೆದು ಮುಸ್ಲಿಮರನ್ನ ಒಲೈಕೆ ಮಾಡಲು ಹೋಗಿದ್ದಾರೆ. ನಮ್ಮ ಜನಾಂಗವನ್ನು ಕಡಿಮೆ ತೋರಿಸಿದ್ದಾರೆ. ನಮ್ಮ ನಮ್ಮ ಜನಾಂಗದ ನಡುವೆ ಹೋರಾಟ ಮಾಡುವ ಸ್ಥಿತಿಗೆ ಈ ಸರ್ಕಾರ ತಂದಿದೆ ಎಂದು ಕಿಡಿಕಾರಿದರು.
ಜಾತಿಗಣತಿ ವರದಿ ವಿರೋಧ ಮಾಡಲು ಕಾರಣಗಳಿವೆ. ಸ್ವಾಗತಿಸಲು ಕೆಲವು ಕಾರಣಗಳಿವೆ. ಮುಸ್ಲಿಮರನ್ನು ಒಲೈಕೆ ಮಾಡಲು ನಂ.1 ಅಂತ ತೋರಿಸಿದ್ದಾರೆ. ಮುಸ್ಲಿಮರನ್ನ ಡಿವಿಷನ್ ಮಾಡಿಲ್ಲ. ಒಟ್ಟು ಮಾಡಿ ಗಣತಿ ಮಾಡಿದ್ದಾರೆ.
ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಅವರನ್ನು ವಿಂಗಡಣೆ ಮಾಡಿದ್ದಾರೆ. ಮುಸ್ಲಿಮರು ಜಾಸ್ತಿಯಿದ್ದರೆ ಅವರು ಹೇಗೆ ಮೈನಾರಿಟಿ ಆಗುತ್ತಾರೆ. ಹಾಗಾದರೆ ಮುಸ್ಲಿಮರು ಮೈನಾರಿಟಿ ಅಲ್ಲ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.