ಬೆಂಗಳೂರು: ಆರ್ ಸಿಬಿ ಗೆಲ್ಲುತ್ತೆ ಎಂದು ಈಗಲೇ ಹೇಳಬೇಡಿ ಎಂದು ಮಾಜಿ ನಾಯಕರೂ ಆಗಿರುವ ಅನಿಲ್ ಕುಂಬ್ಳೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ಸಿಬಿ ಗೆಲ್ಲಬೇಕು ಎಂಬುದು ನಮ್ಮ ಹೃದಯದ ಮಾತು. ಹಾಗೆಯೇ ಆಗಲಿ ಎಂದು ಹಾರೈಸೋಣ ಎಂದರು. ಪಂಜಾಬ್ ತಂಡದಲ್ಲೂ ನಾನು ಆಡಿದ್ದೆ.
ಆರ್ಸಿಬಿಯಲ್ಲೂ ಆಡಿದ್ದೆ. ಎರಡೂ ತಂಡಗಳು ಬೆಸ್ಟ್. ಉತ್ತಮ ಪ್ರದರ್ಶನ ನೀಡಿದ ತಂಡಗಳೇ ಫೈನಲ್ ಪ್ರವೇಶಿಸಿವೆ. ಆರ್ಸಿಬಿ ಗೆಲ್ಲಲಿ ಎಂಬುದು ಹಾರೈಕೆ ಎಂದು ಹೇಳಿದರು. ಇನ್ನೂ ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನನಗೆ ಜವಾಬ್ದಾರಿ ನೀಡಿ ಸರ್ಕಾರ ಒಂದು ಅವಕಾಶ ಕೊಟ್ಟಿದೆ. ಮುಂಚೆಯೂ ನಾನು ವನ್ಯಜೀವಿ ಮಂಡಳಿ ಉಪಾಧ್ಯಕ್ಷನಾಗಿದ್ದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಅರಣ್ಯ ಸಚಿವರು ಈ ಅವಕಾಶ ಕೊಟ್ಟಿದ್ದಾರೆ. ವನ್ಯಜೀವಿಗಳ ಮೇಲೆ ನನಗೆ ಕಾಳಜಿಯಿದೆ. ನನ್ನ ಕೈಯಲ್ಲಾಗುವ ಸೇವೆಯನ್ನು ನಾನು ಸಲ್ಲಿಸುತ್ತೇನೆ. ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿಸಲು ಮಾಧ್ಯಮಗಳ ಸಹಕಾರ ಕೂಡಾ ಮುಖ್ಯ ಎಂದು ಹೇಳಿದರು.