Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಾತ್ರಿ ಮಲಗಿದ್ದಾಗ ಕೈ-ಕಾಲು ಸೆಳೆತ ಆಗೋದ್ಯಾಕೆ? ಕಾರಣ ತಿಳಿದ್ರೆ ಶಾಕ್ ಆಗ್ತೀರಾ?

    By AIN AuthorJune 22, 2025
    Share
    Facebook Twitter LinkedIn Pinterest Email
    Demo

    ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು.

    ಎತ್ತಿನಹೊಳೆ ಯೋಜನೆಯಲ್ಲಿ ಮೊದಲು ಕುಡಿಯುವ ನೀರು ಪೂರೈಕೆ, ನಂತರ ಕೆರೆಗಳಿಗೆ ನೀರು: ಡಿಸಿಎಂ ಡಿ.ಕೆ. ಶಿವಕುಮಾರ್

    ಕೈ ಅಥವಾ ಕಾಲುಗಳಲ್ಲಿ ಕೆಲವರಿಗೆ ಪದೇ ಪದೇ ಮರಗಟ್ಟುವಿಕೆ ಸಮಸ್ಯೆಯು ಕಾಣಿಸುವುದು. ಇದು ತುಂಬಾ ಜಟಿಲ ಸಮಸ್ಯೆ ಮತ್ತು ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನಾವು ನಿಮಗೆ ಈ ಬಗ್ಗೆ ತುಂಬಾ ಮಹತ್ವದ ಮಾಹಿತಿಗಳನ್ನು ತಿಳಿಸಿಕೊಡಲಿದ್ದೇವೆ. ನಿದ್ರೆಯ ಸಮಯದಲ್ಲಿ ಅಥವಾ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಅಥವಾ ಮಲಗುವುದರಿಂದ ಎದ್ದಾಗ, ನಿಮ್ಮ ಬೆನ್ನು ಮತ್ತು ಕಾಲುಗಳಲ್ಲಿ ಸ್ನಾಯುಗಳ ಸೆಳೆತ ಉಂಟಾಗುತ್ತದೆ. ನೀವು ರಾತ್ರಿ ನಿದ್ರಿಸುತ್ತಿರುವಾಗ ಮತ್ತು ಹೆಚ್ಚು ತಿರುಗಾಡಿದಾಗ, ನಿಮ್ಮ ಕಾಲಿನ ಸ್ನಾಯುಗಳಲ್ಲಿ ಸೆಳೆತ ಅಥವಾ ಮರಗಟ್ಟಿದಂತೆ ಭಾಸವಾಗುತ್ತದೆ. ಇದು ಅನೇಕ ಜನರಿಗೆ ಸಂಭವಿಸುತ್ತದೆ.

    ಸ್ನಾಯು ಸೆಳೆತ ಸಾಮಾನ್ಯವಾಗಿ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ, ಮರಗಟ್ಟುವಿಕೆಯ ನಂತರವೂ ನೋವು ಮಾತ್ರ ಹಾಗೇ ಇರುತ್ತದೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

    ಸ್ನಾಯುಗಳ ಸೆಳೆತಕ್ಕೆ ಒಂದು ಕಾರಣವೆಂದರೆ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದು. ನೀರಿನ ಕೊರತೆಯು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಮಲಗಿದಾಗ ಅಥವಾ ನಡೆಯುವಾಗ, ಕುಳಿತುಕೊಳ್ಳುವಾಗ ಅಥವಾ ಮಲಗಿರುವ ಸ್ಥಾನದಿಂದ ಎದ್ದೇಳುವಾಗ ಸ್ನಾಯುಗಳು ನೋಯುತ್ತವೆ. ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲ ಸಂಗ್ರಹವಾದರೆ ಅಥವಾ ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ಕೊರತೆಯಿದ್ದರೆ, ಸ್ನಾಯುಗಳು ಆಗಾಗ್ಗೆ ಸೆಳೆತಕ್ಕೆ ಒಳಗಾಗಬಹುದು

    ಸ್ನಾಯು ಸೆಳೆತವಿದ್ದರೆ, ತಕ್ಷಣವೇ ಪೀಡಿತ ಪ್ರದೇಶಕ್ಕೆ ಐಸ್ ಹಚ್ಚಿ. ಸ್ನಾಯುವನ್ನು ವಿಶ್ರಾಂತಿ ಮಾಡಲು ತ್ವರಿತವಾಗಿ ಮಸಾಜ್ ಮಾಡಿ. ಆ ಪ್ರದೇಶದ ಮೇಲೆ ಒತ್ತಿ ಮಸಾಜ್ ಮಾಡಿ, ಆದರೆ ಅದು ನೋವಾಗಲ್ಲ. ಬಿಸಿ ನೀರಿನಲ್ಲಿ ಟವಲ್ ಅನ್ನು ನೆನೆಸಿ ಚೆನ್ನಾಗಿ ಶಾಖ ಕೊಡಿ. ಅಲ್ಲದೇ ಇದನ್ನು ನೋವಿನ ಜಾಗದಲ್ಲಿಟ್ಟುಕೊಳ್ಳಿ.

    ಕುರ್ಚಿಯ ಮೇಲೆ ನಿಂತುಕೊಳ್ಳಿ. ನೋವಿರುವ ಕಾಲನ್ನು ಮೇಲಕ್ಕೆತ್ತಿ ನಿಂತುಕೊಳ್ಳಿ. 10 ಸೆಕೆಂಡುಗಳ ಕಾಲ ಹಾಗೆಯೇ ಇರಿ ಮತ್ತು ನಂತರ ಅದನ್ನು ಕೆಳಕ್ಕೆ ಇಳಿಸಿ. ಇದನ್ನು ಹಲವಾರು ಬಾರಿ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ

    ನೀವು ಆಗಾಗ್ಗೆ ಸ್ನಾಯು ಸೆಳೆತವನ್ನು ಅನುಭವಿಸುತ್ತಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಮಲಗುವಾಗ ನಿಮ್ಮ ಪಾದಗಳ ಕೆಳಗೆ ಒಂದು ದಿಂಬನ್ನು ಇರಿಸಿ.

    ಹಸಿರು ತರಕಾರಿಗಳು, ಹಣ್ಣುಗಳು, ಮೊಟ್ಟೆಗಳು ಮತ್ತು ಹಾಲು ಸೇವಿಸಿ. ಎಳನೀರು ಕುಡಿಯಿರಿ. ಆಯಾಸದ ನಂತರ ನಿಮ್ಮ ಕಾಲಿನ ಸ್ನಾಯುಗಳು ಊದಿಕೊಳ್ಳುತ್ತಿವೆ ಮತ್ತು ಚರ್ಮದ ಬಣ್ಣ ಬದಲಾಗುತ್ತಿದೆ ಎಂದು ನೀವು ಗಮನಿಸಿದರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

    Demo
    Share. Facebook Twitter LinkedIn Email WhatsApp

    Related Posts

    ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!

    June 21, 2025

    ಮಳೆಗಾಲದಲ್ಲಿ ಬಟ್ಟೆ ಬೇಗ ಒಣಗುತ್ತಿಲ್ವಾ..? ಹಾಗಾದ್ರೆ ಬೇಗನೆ ಒಣಗಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

    June 21, 2025

    ಜೂನ್‌ 21 ರಂದೇ ಯೋಗ ದಿನಾಚರಣೆ ಯಾಕೆ? ಇದರ ಹಿಂದಿನ ಅಚ್ಚರಿ ಕಾರಣ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    June 21, 2025

    ನಿಮಗಿದು ಗೊತ್ತಾ!? ಪೂಜೆಯಲ್ಲಿ ಹಸುವಿನ ತುಪ್ಪವನ್ನೇ ಯಾಕೆ ಬಳಸಬೇಕು.?

    June 20, 2025

    ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    June 20, 2025

    ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!

    June 20, 2025

    ಮಧುಮೇಹಿಗಳ ಗಮನಕ್ಕೆ: ಮನೆಯಲ್ಲಿರುವ ಈ ಮಸಾಲೆಯನ್ನು ಹಾಲಿಗೆ ಬೆರಸಿ ಕುಡಿಯಿರಿ! ಶುಗರ್ ಕಂಟ್ರೋಲ್ ಇರತ್ತೆ!

    June 20, 2025

    ವಸತಿ ಯೋಜನೆಗಳಲ್ಲಿ ಮುಸ್ಲಿಂರಿಗೆ ಮೀಸಲಾತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಹ್ಲಾದ್ ಜೋಶಿ!

    June 20, 2025

    ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!

    June 20, 2025

    ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದೆಯೇ..? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ.!

    June 20, 2025

    ನಿತ್ಯ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರು ಕುಡಿದ್ರೆ ಲಿವರ್ ಕ್ಲೀನ್ ಆಗುತ್ತಾ? ಇಲ್ಲಿದೆ ಉತ್ತರ!

    June 19, 2025

    ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.