ರಾಮನಗರ : ರಸ್ತೆ ಮೇಲೆ ಜಲ್ಲಿಕಲ್ಲು ಹಾಕಿದ್ದಕ್ಕೆ ಮಹಿಳೆಯ ಮೇಲೆ ದರ್ಪ ತೋರಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ. ರಾಮನಗರದ ವಿಜಯನಗರದಲ್ಲಿ ಘಟನೆ ನಡೆದಿದ್ದು, ಮಹದೇವಮ್ಮ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.
ಕಿರಣ್ ಸಾಗರ್ ಎಂಬಾತನ ವಿರುದ್ಧ ದರ್ಪ ತೋರಿದ್ದು, ಸಿಸಿ ಕ್ಯಾಮರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಮಹದೇವಮ್ಮ ಅವರು ಮನೆಯ ಮೇಲ್ಭಾಗದ ಕಟ್ಟಡಕ್ಕೆ ಮೋಲ್ಡ್ ಹಾಕಲು ಜಲ್ಲಿ ತರಿಸಿದ್ದರು. ಹೀಗಾಗಿ ಮನೆಯ ಮುಂದೆ ರಸ್ತೆಯ ಮೇಲೆ ಜಲ್ಲಿ ಸುರಿಸಿದ್ದರು.
ಸೋಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ; ಬಸ್ ಚಾಲಕನ ಸ್ಥಿತಿ ಗಂಭೀರ
ಇದರಿಂದಾಗಿ ರಸ್ತೆಯಲ್ಲಿ ಸಂಚಾರಿಸಲು ಅಡ್ಡವಾಗುತ್ತದೆ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು, ಆನಂತರ ಮನೆಯ ಮೇಲೆ ಇಟ್ಟಿಗೆ ಎಸೆದಿದ್ದಾನೆ. ಈ ಸಂಬಂಧ ರಾಮನಗರದ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಿರಣ್ ಸಾಗರ್, ಹೇಮಾವತಿ, ಪ್ರಿಯಾಂಕಾ ಎಂಬುವವರ ವಿರುದ್ಧ ಬಿಎನ್ ಎಸ್ 115(2), 3(5), 351(2), 352,74 ರ ಅಡಿ ಎಫ್ಐಆರ್ ದಾಖಲಿಸಲಾಗಿದೆ.